ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಮುದ್ರದಾಳದಿಂದ ಬಿಲ್ಲೊಂದನ್ನು ಹೊರತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದು ಭಗವಾನ್ ಶ್ರೀರಾಮನ ಬುಲ್ಲು ಎಂಬ ಅಡಿಬರಹದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ನ ತನಿಖೆಯಲ್ಲಿ ಇದು ಕೃತಕ ಬುದ್ದಿಮತ್ತೆ ಉಪಯೋಗಿಸಿ ತಯಾರಿಸಿದ ವಿಡಿಯೋ ಎಂಬುದು ಸಾಬೀತಾಗಿದೆ.
ಫೇಸ್ಬುಕ್ನಲ್ಲಿ ಬಳಕೆದಾರರೊಬ್ಬರು ಈ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದು, ಈ ಬಿಲ್ಲು ಸಮುದ್ರದಲ್ಲಿ ಪತ್ತೆಯಾಗಿದೆ ಮತ್ತು ಇದು ರಾಮಾಯಣ ಕಾಲದ ಪುರಾವೆಯಾಗಿದೆ ಎಂದು ಹೇಳಲಾಗುತ್ತಿದೆ. ರಾಮಾಯಣದ ಪ್ರಕಾರ, ಭಗವಾನ್ ಶ್ರೀ ರಾಮನಿಗೆ ಕೋದಂಡ್ ಎಂಬ ವಿಶೇಷ ಬಿಲ್ಲು ಇತ್ತು ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ, ಸಮುದ್ರದಿಂದ ಬಿಲ್ಲು ಹೊರಬರುತ್ತಿರುವುದು, ಆ ಬಿಲ್ಲು ದೋಣಿಯ ಮೇಲೆ ಇರಿಸಿರುವುದು, ಪೊಲೀಸರು ಸುತ್ತುವರಿದಿರುವ ದೃಶ್ಯಗಳಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ