ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಜೊತೆ ಯುದ್ಧದ ಅನಿವಾರ್ಯತೆ ಇಲ್ಲ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಪಾಕ್ ಜೊತೆ ಯುದ್ಧ ಅನಿವಾರ್ಯತೆ ಇಲ್ಲ ಎಂಬ ಸಿಎಂ ಹೇಳಿಕೆ ಪಾಕ್ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದರ ಬೆನ್ನಲ್ಲೇ ಸಿಎಂ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದಾರೆ. ಯುದ್ಧ ಅನಿವಾರ್ಯ ಆದಾಗ ಮಾತ್ರ ಮಾಡಬೇಕು. ಯದ್ದದಿಂದ ಪರಿಹಾರ ಅಲ್ಲ. ಯುದ್ದ ಬೇಡವೇ ಬೇಡ ಅಂತಾ ಹೇಳಲಿಲ್ಲ. ಭದ್ರತೆ ಕೊಡಬೇಕು ಎಂದು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ತಿರುಚಿದ್ದಾರೆ.
ಪಾಕಿಸ್ತಾನದವರ ಜೊತೆ ಯುದ್ಧ ಮಾಡುವುದೇ ಬೇಡ ಅಂತಾ ಹೇಳಿಲ್ಲ. ಆದರೆ, ಯುದ್ಧನೇ ಪರಿಹಾರ ಅಲ್ಲ. ಭದ್ರತೆ ಕೊಡಬೇಕಲ್ವಾ? ಭದ್ರತೆ ಕೊಡಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿ ಅಲ್ವ? ಹೀಗಾಗಿ, ಭದ್ರತೆಯಲ್ಲಿ ವೈಫಲ್ಯ ಇದೆ ಅಂತಾ ಹೇಳಿದ್ದೀನಿ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.