March 30, 2026
Monday, March 30, 2026
spot_img

ಬೆಂಗಳೂರಿನಲ್ಲಿ ಇರೋ ಥರ ನಮ್ಮಲ್ಲಿ ಟ್ರಾಫಿಕ್‌ ಸಮಸ್ಯೆ ಇಲ್ಲ, ನಾವ್‌ ಸೇಫ್‌ ಎಂದ ತೆಲಂಗಾಣ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಹಿಂದೆ ಬೆಂಗಳೂರು ಅಂದ್ರೆ ಐಟಿ ಸಿಟಿ ಅಂತಿದ್ರು. ಆದರೆ ಈಗ ಬೆಂಗಳೂರು ಅಂದ್ರೆ ಅಯ್ಯೋ ಟ್ರಾಫಿಕ್‌ ಸಮಸ್ಯೆ ಅಂತ ನೆನಪು ಮಾಡ್ಕೋತಾರೆ. ಆದರೆ ನಮಗೆ ಆ ಸ್ಥಿತಿ ಇಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಹೈದರಾಬಾದ್‌ ತಣ್ಣಗಿದೆ, ನಮಗೆ ಟ್ರಾಫಿಕ್‌ ಸಮಸ್ಯೆ ಇಲ್ಲ. ಅದೇ ಪಕ್ಕದ ಬೆಂಗಳೂರನ್ನು ನೋಡಿ ಬರೀ ಟ್ರಾಫಿಕ್‌ನಿಂದ ಒದ್ದಾಡ್ತಾರೆ. ಹೇಗಿದ್ದ ಸಿಟಿ ಹೇಗಾಯ್ತು ನೋಡಿ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೇ ಬೆಂಗಳೂರಿನ ಮಳೆ ಸಮಸ್ಯೆಯನ್ನೂ ಒತ್ತಿ ಹೇಳಿದ್ದಾರೆ. ನಮ್ಮ ಊರು ಬೇರೆ ಊರುಗಳಿಗಿಂತ ಬೆಟರ್‌ ಎಂದು ಇಂಡೈರೆಕ್ಟ್‌ ಆಗಿ ಹೇಳಿದ್ದಾರೆ. ಹೈದರಾಬಾದ್ ಅನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡುತ್ತೇವೆ. ನಮಗೆ ಬೆಂಗಳೂರು ಅಥವಾ ಮುಂಬೈ ನಗರಗಳು ಸ್ಪರ್ಧಿಯಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಸಿಂಗಾಪುರ ಮತ್ತು ಟೋಕಿಯೋದಂತಹ ಜಾಗತಿಕ ನಗರಗಳ ಜೊತೆಗೆ ಎಂದು ಘೋಷಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !