ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಹೆಣ್ಣುಮಕ್ಕಳ ಸಿಂದೂರ ಅಳಿಸಿದವರನ್ನು ಸುಮ್ಮನೆ ಬಿಡಲಾದೀತೆ ಹೊಸಕಿ ಹಾಕಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ವಡೋದರಾದಲ್ಲಿ ರೋಶ್ ಶೋ ನಡೆಸಿ ಬಳಿಕ ಮಾತನಾಡಿದ ಅವರು, .ಆಪರೇಷನ್ ಸಿಂದೂರ್ ಕೇವಲ ಒಂದು ಕಾರ್ಯಾಚರಣೆಯಲ್ಲ. ಮೋದಿಯನ್ನು ಎದುರಿಸುವುದು ಇಷ್ಟು ಕಷ್ಟ ಎಂದು ಭಯೋತ್ಪಾದಕರು ಕನಸಿನಲ್ಲಿಯೂ ಊಹಿಸಿರಲಿಲ್ಲ.ಒಮ್ಮೆ ಆಲೋಚಿಸಿ ನೋಡಿ, ಒಬ್ಬ ತಂದೆಗೆ ತನ್ನ ಮಕ್ಕಳ ಮುಂದೆಯೇ ಗುಂಡು ಹಾರಿಸಲಾಗಿದೆ. ಇಂದಿಗೂ ಆ ಚಿತ್ರವನ್ನು ನೋಡಿದಾಗ ನನ್ನ ರಕ್ತ ಕುದಿಯುತ್ತದೆ. ಹಾಗಾಗಿ ದೇಶದ ಜನರು ಅವರನ್ನು ಯಾವುದಕ್ಕಾಗಿ ಆಯ್ಕೆ ಮಾಡಿದ್ದರೋ ಅದನ್ನು ಮೋದಿ ಮಾಡಿದ್ದಾರೆ ಎಂದರು.
2014ರ ಈ ದಿನದಂದು ನಾನು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ನಾನು ದೇಶ ಸೇವೆಯಲ್ಲಿ ನಿರತನಾಗಿದ್ದೇನೆ. ಈ ವರ್ಷಗಳಲ್ಲಿ, ದೇಶವು ಊಹಿಸಲೂ ಅಸಾಧ್ಯವಾದ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ. ಈ ವರ್ಷಗಳಲ್ಲಿ, ನಾವು ದಶಕಗಳಷ್ಟು ಹಳೆಯದಾದ ಸರಪಳಿಗಳನ್ನು ಮುರಿದಿದ್ದೇವೆ. ದೇಶವು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುತ್ತಿದೆ. ಇಂದು ದೇಶವು ಹತಾಶೆಯ ಕತ್ತಲೆಯಿಂದ ಹೊರಬಂದಿದೆ ಮತ್ತು ಆತ್ಮವಿಶ್ವಾಸದ ಬೆಳಕಿನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದೆ. ಇಂದು ನಾವು 140 ಕೋಟಿ ಭಾರತೀಯರು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ನಮ್ಮೆಲ್ಲರ ಶಕ್ತಿಯಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ದೇಶದ ಪ್ರಗತಿಗೆ ಏನು ಬೇಕೋ ಅದನ್ನು ನಾವು ಭಾರತದಲ್ಲಿಯೇ ಮಾಡಬೇಕು, ಇದು ಇಂದಿನ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
ಭಾರತವು ಉತ್ಪಾದನಾ ಜಗತ್ತಿನಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಭಾರತವು ಜಗತ್ತಿಗೆ ಸರಕುಗಳನ್ನು ರಫ್ತು ಮಾಡುತ್ತಿದೆ ಇಂದು ನಾವು ಸ್ಮಾರ್ಟ್ ಫೋನ್ಗಳಿಂದ ಹಿಡಿದು ವಾಹನಗಳು, ಆಟಿಕೆಗಳು, ಮಿಲಿಟರಿ ಶಸ್ತ್ರಾಸ್ತ್ರಗಳು ಮತ್ತು ಔಷಧಿಗಳವರೆಗೆ ಪ್ರಪಂಚದಾದ್ಯಂತದ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಇಂದು ಭಾರತವು ರೈಲ್ವೆ, ಮೆಟ್ರೋ ಮತ್ತು ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ತಯಾರಿಸುವುದಲ್ಲದೆ, ಅದನ್ನು ಜಗತ್ತಿಗೆ ರಫ್ತು ಮಾಡುತ್ತದೆ. ನಮ್ಮ ದಾಹೋದ್ ಇದಕ್ಕೆ ಜೀವಂತ ಉದಾಹರಣೆ ಎಂದರು.
ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ರೋಡ್ ಶೋ ಬಳಿಕ ದಾಹೋದ್ನಲ್ಲಿ 9000 HP ಪವರ್ ಇಂಜಿನ್ ಸ್ಥಾವರವನ್ನು ಉದ್ಘಾಟಿಸಿದರು.