February 8, 2026
Sunday, February 8, 2026
spot_img

WEATHER | ಚಳಿಗೆ ‘ಬೈ-ಬೈ’, ಬಿಸಿಲಿಗೆ ‘ಹಾಯ್’: ರಾಜ್ಯದಲ್ಲಿ ಶುರುವಾಯ್ತು ಸಮ್ಮರ್ ವೈಬ್ಸ್!

ಕರ್ನಾಟಕದಲ್ಲಿ ಚಳಿಗಾಲದ ಅಬ್ಬರ ತಗ್ಗಿ, ಬೇಸಿಗೆಯ ಲಕ್ಷಣಗಳು ನಿಧಾನವಾಗಿ ಗೋಚರಿಸಲಾರಂಭಿಸಿವೆ. ಮೈಕೊರೆಯುವ ಚಳಿಯಿಂದ ಕಷ್ಟಪಡುತ್ತಿದ್ದ ಜನರಿಗೆ ಈಗ ಸಮಾಧಾನ ಸಿಕ್ಕಿದೆಯಾದರೂ, ಸೂರ್ಯನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಮುಂಜಾನೆ ಮತ್ತು ಸಂಜೆ ವೇಳೆ ಮಾತ್ರ ಲಘು ಚಳಿ ಇರಲಿದೆ. ಆದರೆ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 2-3 ದಿನಗಳ ಕಾಲ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೂರ್ಯನ ಶಾಖ ಇಂದಿನಿಂದಲೇ ಏರಲಿದ್ದು, ಹೊರಗೆ ಹೋಗುವಾಗ ಜನರು ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಬೆಳಗಿನ ಜಾವ ಇಟ್ಟಿದ್ದ ಸ್ವೆಟರ್‌ಗಳು ಈಗ ಮಧ್ಯಾಹ್ನವಾಗುತ್ತಿದ್ದಂತೆ ಬದಿಗೆ ಸರಿಯುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !