ಹೊಸ ದಿಗಂತ ವರದಿ,ಗದಗ :
ಅಕ್ರಮ ಗಣಿಗಾರಿಕೆಯಿಂದ ನಷ್ಟವಾಗಿರುವ ಒಂದು ಲಕ್ಷ ಐವತ್ತು ಸಾವಿರ ಕೋಟಿ ರೂ. ಸಂಪತ್ತು ಕನ್ನಡಿಗರಿಗೆ ಮರಳಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಅವರಿಗೆ ಏಳು ಪುಟಗಳ ಸಮಗ್ರ ವರಿಯನ್ನು ಸಲ್ಲಿಸಿದ್ದೆನೆ. ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ ಅಥವಾ ಕ್ರಮದ ತೊಟ್ಟಿಗೆ ಹಾಕುತ್ತಾರೆ ಎನ್ನುವದು ಸಿಎಂ ನಿರ್ಣಯಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಎಚ್ಡಿಕೆ ಅವರು ಎಚ್.ಕೆ. ಪಾಟೀಲ ಅವರ ಪತ್ರಗಳನ್ನು ಸಿಎಂ ಅವರು ಕಸದ ಬುಟ್ಟಿಗೆ ಹಾಕುತ್ತಾರೆ ಎಂಬ ಹೇಳಿಕೆಗೆ ಖಂಡಿಸಿದ ಸಚಿವರು ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆಯ ವರದಿಗಳು ಅವರ ಕೈಯಲ್ಲಿದ್ದವು ಆಗ ಅವರು ಅಭಿಷೇಕ ಮಾಡುತ್ತಿದ್ದರೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ದೊಡ್ಡ ಸ್ಥಾನದಲ್ಲಿದ್ದಾರೆ. ಪ್ರಜಾಪ್ರಭುತ್ವಕ್ಕೆ ಸವಾಲಾಗಿರುವ ಹಾಗೂ ಅಕ್ರಮ ಗಣಿಗಾರಿಕೆಯಿಂದ ನಷ್ಟವಾಗಿರುವ ಸಂಪತ್ತಿನ ಮೌಲ್ಯವನ್ನು ಕನ್ನಡಿಗರಿಗೆ ವಾಪಸ್ ತರಲು ಅಡಿ ಇಡಿ, ಹೆಚ್ಚಿನ ದಾಖಲೆಗಳಿದ್ದರೆ ನೀಡಿ ಸಚಿವ ಎಚ್.ಕೆ.ಪಾಟೀಲ ಅವರು ಸವಾಲು ಹಾಕಿದರು.