ನಿಮ್ಮ ಉದ್ದೇಶ ಇರೋದೆ ನನ್ನ ಮರ್ಡರ್​ ಮಾಡೋಕೆ: ಪೊಲೀಸರ ವಿರುದ್ಧ ಸಿ.ಟಿ.ರವಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವೆ ಲಕ್ಷ್ಮೀ ಹೆಬಾಳ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಹೊತ್ತಿರುವ ಬಿಜೆಪಿ ಎಂಎಲ್ ಸಿ ಸಿಟಿ ರವಿ ಅವರನ್ನು ಬಂಧಿಸಲಾಗಿದ್ದು, ಬೆಂಗಳೂರಿಗೆ ಕರೆ ತರಬೇಕಿದೆ.

ಆದರೆ ಪೊಲೀಸರು ರಾತ್ರಿಯಿಡೀ ತಮ್ಮ ಕಾರುಗಳಲ್ಲಿ ಅವರನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕರೆದೊಯ್ಯುತ್ತಾರೆ. ಖಾನಾಪುರ ಠಾಣೆಯಿಂದ ಸಿ.ಟಿ.ರವಿಯನ್ನು ಕರೆದುಕೊಂಡು ಬಂದ ಪೊಲೀಸ್ ಅಧಿಕಾರಿ ಬೆಂಗಳೂರಿಗೆ ಕರೆದೊಯ್ಯುತ್ತಾ ಕಾಲಹರಣ ಮಾಡಿದ್ದಾರೆ.

“ನನ್ನನ್ನು ಇಲ್ಲಿಗೆ ಯಾಕೆ ಕರ್ಕೊಂಡು ಬಂದ್ರಿ, ನಿಮ್ಮ ಉದ್ದೇಶ ಇರೋದೆ ನನ್ನ ಮರ್ಡರ್​ ಮಾಡೋಕೆ, ನನ್ನ ಶೂಟ್ ಮಾಡಿ ಸಾಯಿಸಿ, ನ್ಯಾಯಾಧೀಶರ ಮುಂದೆ ಹಾಜರಾಗದೆ ಓಡಾಡ್ತಿರೋದ್ಯಾಕೆ?” ನಾನು ಬಂಧನದಲ್ಲಿಲ್ಲದಿದ್ದರೂ ನನ್ನನ್ನು ಕೊಲೋಕೇ ಹೊರಟಿದ್ದೀರಾ? ” ಎಂದು ಸಿ.ಟಿ.ರವಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!