SHOCKING | ಚಿಕನ್‌ ಸಾಂಬಾರ್‌ ಮಾಡು ಎಂದ ಗಂಡನ ಮೆದುಳು ಕಿತ್ತು ಹೊರಬರುವಂತೆ ಹೊಡೆದು ಕೊಂದ ಪತ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕನ್‌ ಸಾಂಬಾರ್‌ ಮಾಡು ಎಂದ ಗಂಡನ ಮೆದುಳು ಕಿತ್ತು ಹೊರಬರುವಂತೆ ಪತ್ನಿ ಹೊಡೆದು ಕೊಂದಿದ್ದಾಳೆ.

ಉತ್ತರ ಪ್ರದೇಶದ ಶಹಜಹಾನ್‌ಪುರದ ಮಹಿಳೆ ತನ್ನ ಗಂಡನ ಮೇಲೆ ಕುಳಿತು ಆತನ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾಳೆ. ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ. ಗಂಡ ಪದೇ ಪದೇ ಮಾಂಸಾಹಾರ ತಯಾರಿಸಲು ಹೇಳುತ್ತಿದ್ದ, ಇದರಿಂದ ಕೋಪಗೊಂಡ ಪತ್ನಿ ಆತನನ್ನೇ ಭೀಕರವಾಗಿ ಕೊಂದು ಹಾಕಿದ್ದಾಳೆ ಎಂದು ತಿಳಿದುಬಂದಿದೆ.

ಸತ್ಯಪಾಲ್ (40) ಮತ್ತು ಗಾಯತ್ರಿ ದೇವಿ (39) ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಹತೌಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದು, ಮಗಳು ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಮಗ 12ನೇ ತರಗತಿಯಲ್ಲಿ ಓದುತ್ತಿದ್ದಾನೆ. ವರದಿಯ ಪ್ರಕಾರ, ಗಾಯತ್ರಿ ಸಸ್ಯಾಹಾರಿಯಾಗಿದ್ದು, ಸತ್ಯಪಾಲ್ ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಿದ್ದ. ಇದಲ್ಲದೇ ಆಗಾಗ್ಗೆ ಮನೆಯಲ್ಲಿ ಚಿಕನ್​ ಮಾಂಸಾಹಾರ ತಯಾರಿಸುವಂತೆ ಹೆಂಡತಿಯ ಬಳಿ ಹೇಳುತ್ತಿದ್ದ. ಇದರಿಂದಾಗಿ ಆಗಾಗ ಗಂಡ ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿತ್ತು.

ಗುರುವಾರ ಸತ್ಯಪಾಲ್ ಮತ್ತೆ ಮಾಂಸಾಹಾರಕ್ಕೆ ಬೇಡಿಕೆ ಇಟ್ಟಿದ್ದಾನೆ. ಗಾಯತ್ರಿ ನಿರಾಕರಿಸಿದಾಗ, ಅವರಿಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ಜಗಳದ ನಡುವೆ ಗಾಯತ್ರಿ ಇಟ್ಟಿಗೆ ಎತ್ತಿಕೊಂಡು ಗಂಡನ ಮೇಲೆ ಹಲ್ಲೆ ನಡೆಸಿದ್ದಾಳೆ. ಸತ್ಯಪಾಲ್ ಹೊರಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಗಾಯತ್ರಿ ಅವನನ್ನು ಹಿಂಬಾಲಿಸಿ, ನೆಲಕ್ಕೆ ಕೆಡವಿ, ನಂತರ ಅವನ ಎದೆಯ ಮೇಲೆ ಕುಳಿತು, ಪಟ್ಟುಬಿಡದೆ ಇಟ್ಟಿಗೆಯಿಂದ ಅವನ ತಲೆಗೆ ಹೊಡೆದಿದ್ದಾಳೆ. ಅವಳ ಕೋಪವು ಎಷ್ಟು ತೀವ್ರವಾಗಿತ್ತು ಎಂದರೆ, ಆಕೆ ಹೊಡೆದ ಏಟಿಗೆ ಆತನ ಮೆದುಳು ಹೊರಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!