ಹೊಸದಿಗಂತ ಡಿಜಿಟಲ್ ಡೆಸ್ಕ್:
2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, 16ನೇ ಬಾರಿಗೆ ಬಜೆಟ್ ಮಂಡನೆಗೆ ಮಾಡಿ ದಾಖಲೆ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಈ ಬಾರಿ ಬಜೆಟ್ನಿಂದ ಬೆಂಗಳೂರಿಗರ ಬಹುದೊಡ್ಡ ನಿರೀಕ್ಷೆ ಎಂದರೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ! ಹೌದು, ಬಜೆಟ್ನಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಹಣ ಮೀಸಲಿಡುತ್ತಾರಾ ಎಂದು ಬೆಂಗಳೂರು ಮಂದಿ ಎದುರು ನೋಡುತ್ತಿದ್ದಾರೆ.
ಟನೆಲ್ ರಸ್ತೆಗೆ ಮತ್ತಷ್ಟು ಅನುದಾನ, ಇಂದಿರಾ ಕ್ಯಾಂಟಿನ್ಗಳಿಗೆ ಮತ್ತಷ್ಟು ಬದಲಾವಣೆ, ಕಾಯಕಲ್ಪ, ನಗರೋತ್ಥಾನ ಯೋಜನೆಗಳಿಗೆ ಸರ್ಕಾರದ ಹೆಚ್ಚಿನ ಅನುದಾನ, ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ, ಹೀಗೆ ಹಲವಾರು ನಿರೀಕ್ಷೆಗಳು ಜನರಲ್ಲಿವೆ.