ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿನ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.
ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ನಡುವಿನ 16.75 ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮೂರು ವರ್ಷಗಳ ಗಡುವು ನೀಡಿದೆ. ಆದರೆ, ಸುರಂಗ ರಸ್ತೆ ಕಾಮಗಾರಿಗೆ ಮೂರು ವರ್ಷದ ಗಡುವು ಅಸಾಧ್ಯವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುರಂಗ ಕಾಮಗಾರಿ ಶುರುವಾದರೇ ಸಾಲು ಸಾಲು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸುರಂಗ ರಸ್ತೆ ನಿರ್ಮಾಣ ವೇಳೆ ಜಲಮೂಲಗಳಾದ ಕೆರೆಗಳು, ಅಂತರ್ಜಲ ವ್ಯವಸ್ಥೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಅಲ್ಲದೇ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೂ ಹಾನಿಯಾಗುವ ಸಾಧ್ಯತೆ ಇದೆ.
ಸುರಂಗ ರಸ್ತೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ. ಸುರಂಗ ರಸ್ತೆ ನಿರ್ಮಾಣ ಬಳಿಕ ಜನರಿಗೆ ಸಂಕಷ್ಟ ತಪ್ಪುವುದಿಲ್ಲ. ಟೋಲ್ ಹೊರೆ ಜೊತೆಗೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಸುರಂಗ ರಸ್ತೆ ಬದಲು ಸಾರ್ವಜನಿಕರ ಸಾರಿಗೆ ಉತ್ತಮಪಡಿಸಲು ತಜ್ಞರು ಸಲಹೆ ನೀಡಿದ್ದಾರೆ.
ಇಗ ಸುರಂಗ ರಸ್ತೆ ಮಾಡಿ ಏನು ಪ್ರಯೋಜನ ಇಲ್ಲ ಸಮಸ್ಯೆಗಳ ಸುರಿಮಳೆಯಾಗುತ್ತದೆ ಇರುವ ರಸ್ತೆ ಹಾಳು ಮಾಡಿ ಮೆಟ್ರೋ ಮಾಡಿದ್ದೀರಲ್ಲ ಆಗಲೇ ಬೆಂಗಳೂರಿಗೆ ಕೆಡುಗಲಾ ಬಂದಿದ್ದು, ಹಿಂದೆ ಇರುವ ರಸ್ತೆಗಳನ್ನು ಹಾಗೇ ಬಿಟ್ಟು, ಸುರಂಗ ಮೆಟ್ರೋ ಮಾಡಬೇಕಿತ್ತು ಸಿಂಗಾಪುರದ ಹಾಗೇ ನಮ್ಮಲ್ಲಿ ದೇಶ ಉದ್ದಾರ ಮಾಡುವವರು ಯಾರು ಇಲ್ಲ ಹಣ ಮಾಡುವವರೇ ಇರುವವರು