ಶಾರುಖ್ ಇಲ್ಲದೆ ಹೋದರೆ, ನಾನು ಇಂದು ಇಲ್ಲಿ ಇರುತ್ತಿರಲಿಲ್ಲ: ಕಣ್ಣೀರಿಟ್ಟ ದೀಪಿಕಾ ಪಡುಕೋಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್​ ಸಿನಿಮಾ ಅದ್ದೂರಿಯಾಗಿ ಪ್ರದರ್ಶನವಾಗುತ್ತಿದ್ದು, ಅಭಿಮಾನಿಗಳು ಸಿನಿಮಾವನ್ನು ಸ್ವೀಕರಿಸಿದ್ದಾರೆ.

ಎಲ್ಲ ಅಡಚಣೆಗಳ ಮಧ್ಯೆ ಜನವರಿ 25ರಂದು ದೇಶ-ವಿದೇಶಗಳಲ್ಲಿ ತೆರೆಕಂಡು, ಬಾಕ್ಸ್​ ಆಫೀಸ್​ ಕಲೆಕ್ಷನ್​​ನಲ್ಲೂ ಮುನ್ನುಗ್ಗುತ್ತಿದೆ.ಈ ಮಧ್ಯೆ ‘ಪಠಾಣ್​’ ಚಿತ್ರದ (Pathaan Movie) ಬಗ್ಗೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ನಟಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ ಘಟನೆಯೂ ನಡೆದಿದೆ.

ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅನುಭವ ಹೇಳಿಕೊಂಡ ದೀಪಿಕಾ, ಹಾಗೇ,ಸಿನಿಮಾ ಬಿಡುಗಡೆಯಾದ ನಂತರ ಅಭಿಮಾನಿಗಳಿಂದ ಬರುವ ಪ್ರೀತಿ-ಹೊಗಳಿಕೆಗೆ ತುಂಬ ಮೌಲ್ಯವಿದೆ. ನಮಗೆ ತೃಪ್ತಿ ನೀಡುತ್ತದ’ ಎಂದು ಹೇಳಿದರು.

ಬಳಿಕ ಶಾರುಖ್​ ಖಾನ್​ ಬಗ್ಗೆ ಮಾತನಾಡಿ ‘ಇವರು ಇಲ್ಲದೆ ಹೋದರೆ, ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನನ್ನ ಮೊದಲ ಹಿಂದಿ ಸಿನಿಮಾದಲ್ಲಿ ಶಾರುಖ್​ ಅವರು ನನಗೆ ತುಂಬ ಪ್ರೀತಿಯಿಂದ ಸಪೋರ್ಟ್ ಮಾಡಿದರು. ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಲು ಅವರೇ ಕಾರಣ. ನನ್ನ ಮತ್ತು ಶಾರುಖ್​ ಅವರ ನಡುವಿನ ಬಾಂಧವ್ಯ, ಬರವಣಿಗೆ, ಮಾತುಗಳಿಗೂ ಮೀರಿದ್ದು. ನಮ್ಮ ಮಧ್ಯೆ ಪರಸ್ಪರ ಪ್ರೀತಿ, ನಂಬಿಕೆ ಅಪಾರವಾಗಿದೆ. ನಾನು ಅವರಲ್ಲಿನ ಕಲಾವಿದನನ್ನು ಎಷ್ಟು ಗೌರವಿಸುತ್ತೇನೋ, ಅಷ್ಟೇ ಅವರನ್ನೊಬ್ಬ ಸಾಮಾನ್ಯ ಮನುಷ್ಯನನ್ನಾಗಿಯೂ ಗೌರವಿಸುತ್ತೇನೆ’ ಎಂದು ಹೇಳಿದರು. ಈ ಮಾತುಗಳನ್ನಾಡುವಾಗ ದೀಪಿಕಾ ಮಾಧ್ಯಮದವರು ಕೇಳಿದ ಪ್ರಶ್ನೆಗೂ ಉತ್ತರಿಸಿದೆ. ಈ ವೇಳೆ ಮಾತನಾಡುವ ನಟಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!