ಯತ್ನಾಳ್ ವಿಚಾರ ಹೈಕಮಾಂಡ್ ಅಂಗಳದಲ್ಲೇ ಸುಖ್ಯಾಂತವಾಗಲಿದೆ: ಅಶೋಕ್ ಮಹತ್ವದ ಸುಳಿವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಬುಲಾವ್ ಮೇರೆಗೆ ವಿಪಕ್ಷ ನಾಯಕ ಆರ್ ಅಶೊಕ್ ದೆಹಲಿಗೆ ತೆರಳಿದ್ದು, ಏರ್​ಪೋರ್ಟ್​ನಿಂದ ನೇರವಾಗಿ ಸಂಸತ್​ಗೆ ತೆರಳಿ ನಡ್ಡಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ನಡ್ಡಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶೋಕ್, ಯತ್ನಾಳ್ ವಿಚಾರ ಹೈಕಮಾಂಡ್ ಪರಿಶೀಲನೆಯಲ್ಲಿದೆ. ಇದು ಸುಖ್ಯಾಂತವಾಗಲಿದೆ. ಹೈಕಮಾಂಡ್‌ನ ನಿರ್ಧಾರಗಳನ್ನು ಪಾಲಿಸುವುದು ನನ್ನ ಕೆಲಸ. ಹೈಕಮಾಂಡ್ ಕಾರ್ಯಕರ್ತರಿಗೆ ಖುಷಿ ಕೊಡುವ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತಕ್ಕೆ ಕಡಿವಾಣ ಹಾಕುವುದಾಗಿ ಹೈಕಮಾಂಡ್ ಪರೋಕ್ಷವಾಗಿ ಹೇಳಿದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!