April 28, 2026
Tuesday, April 28, 2026
spot_img

ಬೀದರ್‌ನಲ್ಲಿ ಸಿಡಿಲು ಬಡಿದು ಯುವ ರೈತನ ದಾರುಣ ಅಂತ್ಯ

ಹೊಸದಿಗಂತ ವರದಿ ​ಬೀದರ್:

ಔರದ ತಾಲೂಕಿನ ಕೆಲವು ಗ್ರಾಮದಲ್ಲಿ ಮುಂಜಾನೆ ಸುರಿದ ಮಳೆಗೆ ಭಾರಿ ಅವಘಡ ಸಂಭವಿಸಿದೆ. ತಾಲೂಕಿನ ಬಾದಲಗಾಂವ ಗ್ರಾಮದ ರಾಹುಲ್ ರಮೇಶ ಭಾಸ್ಕರ (25) ಎಂಬ ವ್ಯಕ್ತಿ ಸಿಡಿಲಿಗೆ ಮೃತಪಟ್ಟಿದ್ದಾರೆ.

ರಾಹುಲ್ ರಮೇಶ ಭಾಸ್ಕರ್ ಅವರು ಮುಂಜಾನೆ ತಮ್ಮ ಜಮೀನಿಗೆ ಹೊದಾಗ ಬೆಳಗಿನ ಜಾವ 5.40ರ ಸುಮಾರಿಗೆ ಸಿಡಿಲು ಬಡಿದು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ.

ಸುದ್ದಿ ಗೊತ್ತಾದ ತಕ್ಷಣ ಔರಾದ ಬಿ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !