April 6, 2026
Monday, April 6, 2026
spot_img

ಮೂರು ತಿಂಗಳಿಂದ ಇದನ್ನೇ ಕೇಳ್ತಿದ್ದೀರಾ, ಸಾಕು ನಿಲ್ಲಿಸಿ! ಕುರ್ಚಿ ಹಂಚಿಕೆ ಪ್ರಶ್ನೆಗೆ ಸಿಎಂ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಸದಾ ಚರ್ಚೆಯಲ್ಲಿರುವ ‘ಅಧಿಕಾರ ಹಂಚಿಕೆ’ ಅಥವಾ ‘ಅವಧಿ ಪೂರ್ವ ಕುರ್ಚಿ ಬದಲಾವಣೆ’ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಾಧ್ಯಮಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸಂಸದ ಡಿ.ಕೆ. ಸುರೇಶ್ ಅವರು, “ಮುಖ್ಯಮಂತ್ರಿಗಳು ಕುರ್ಚಿ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ನೀಡಿದ್ದ ಹೇಳಿಕೆಯ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಕಳೆದ ಮೂರು ತಿಂಗಳಿಂದ ಇದೇ ವಿಷಯವನ್ನು ಕೇಳುತ್ತಿದ್ದೀರಿ, ನಿಮಗೇನು ಬೇರೆ ಕೆಲಸವಿಲ್ಲವೇ?” ಎಂದು ಪ್ರಶ್ನಿಸುವ ಮೂಲಕ ಸುದ್ದಿಗಾರರನ್ನು ತರಾಟೆಗೆ ತೆಗೆದುಕೊಂಡರು.

ನಾನು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ದೆಹಲಿ ನಾಯಕರಿಗೆ ಎಲ್ಲವೂ ತಿಳಿದಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು.

ಇದನ್ನೂ ಓದಿ:

ಡಿ.ಕೆ. ಸುರೇಶ್ ಅವರು ಯಾವುದೋ ಹೇಳಿಕೆ ನೀಡಿದರೆ ಅದಕ್ಕೆ ನನ್ನನ್ನು ಕೇಳಬೇಡಿ, ಅವರನ್ನೇ ಹೋಗಿ ಕೇಳಿ ಎಂದು ನೇರವಾಗಿ ಉತ್ತರಿಸಿದರು.

ಒಟ್ಟಾರೆಯಾಗಿ, ಪದೇ ಪದೇ ಕೇಳಲಾಗುತ್ತಿರುವ ಅಧಿಕಾರ ಬದಲಾವಣೆಯ ಪ್ರಶ್ನೆಗೆ ಪೂರ್ಣವಿರಾಮ ಇಡಲು ಪ್ರಯತ್ನಿಸಿದ ಮುಖ್ಯಮಂತ್ರಿಗಳು, ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !