ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರಂತರ ಹಿಂಸಾಚಾರ ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಆದೇಶ ನೀಡಿದೆ.
ಸಧ್ಯ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಮಾತ್ರ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತಿದೆ. ಇದೀಗ ರಾಜ್ಯಪಾಲರಿಗೂ ಇದನ್ನು ವಿಸ್ತರಿಸಲಾಗಿದೆ.
ಏನಿದು ಝಡ್ ಪ್ಲಸ್ ಭದ್ರತೆ?
ಎಸ್ಪಿಜಿ ಬಳಿಕದ ಅತ್ಯುನ್ನತ ಭದ್ರತಾ ವ್ಯವಸ್ಥೆ ಇದಾಗಿದೆ. ಇಲ್ಲಿ ಸಿಆರ್ಪಿಎಫ್ ಸಿಬ್ಬಂದಿಯೊಂದಿಗೆ 55 ಭದ್ರತಾ ಸಿಬ್ಬಂದಿಗಳು ಇರುತ್ತಾರೆ. ಕೇಂದ್ರ ಪಡೆಗಳು ಝಡ್ ಪ್ಲಸ್ ಹೊಂದಿದ ವ್ಯಕ್ತಿಗೆ ದಿನದ 24 ತಾಸುಗಳ ಕಾಲ ಭದ್ರತೆ ಒದಗಿಸುತ್ತವೆ. ಇನ್ನು ಅಗತ್ಯವಿದ್ದಲ್ಲಿ ಭದ್ರತಾ ತಂಡವು ಎನ್ಎಸ್ಜಿ ಕಮಾಂಡೋಗಳನ್ನು ನಿಯೋಜಿಸಲಾಗುತ್ತದೆ. ಜೊತೆಗೆ ಬುಲೆಟ್ ಫ್ರೂಫ್ ವಾಹನ, ಮೂರು ಪಾಳಿಗಳಲ್ಲಿ ಬೆಂಗಾವಲು ಇರುತ್ತದೆ.