Saturday, March 25, 2023

Latest Posts

ಸ್ಕೂಟಿಯಲ್ಲಿ ಗಾಂಜಾ ಸಾಗಾಟ: ಆರೋಪಿ ಪೊಲೀಸ್ ವಶ

ಹೊಸದಿಗಂತ ವರದಿ, ಮುಂಡಗೋಡ:

ಅಕ್ರಮವಾಗಿ 500 ಗ್ರಾಂ. ಗಾಂಜಾ ಸ್ಕೂಟಿಯ ಡಿಕ್ಕಿಯಲ್ಲಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಗಾಂಜಾ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದ ಘಟನೆ ಬುಧವಾರ ತಾಲೂಕಿನ ಮಳಗಿ ಸನಿಹ ಜರುಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹರಮನಿಕೇರಿ ನಿವಾಸಿ ಮಹ್ಮದ ಪಾರೂಕ್ ತಂದೆ ನಜೀರ ಅಹ್ಮದ್ ಎಂಬವನೆ ಬಂಧಿತ ಆರೋಪಿಯಾಗಿದ್ದಾನೆ.
ಈತ ನಲ್ವತ್ತು ಸಾವಿರ.ಮೌಲ್ಯದ 500ಗ್ರಾಂ.ಗಾಂಜಾವನ್ನು ಸಾಗರದಿಂದ ದಾಸನಕೊಪ್ಪ ಮಾರ್ಗವಾಗಿ ತಾಲೂಕಿನ ಮಳಗಿಯತ್ತ ಬರುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗಾಂಜಾ,ಬೈಕ್ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಸಿಪಿಐ ಸಿದ್ದಪ್ಪ ಸಿಮಾನಿ ಮಾರ್ಗದರ್ಶನ ದಲ್ಲಿ ಪಿಎಸ್ಐ ಯಲ್ಲಾಲಿಂಗ ಹಾಗೂ ಎನ್. ಡಿ. ಜಕ್ಕಣ್ಣವರ ಮತ್ತು ಕೋಟೇಶ, ಅಣ್ಣಪ್ಪ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!