ಕಡಲತಡಿಯಲ್ಲಿ ‘ನಮೋ’ ಹವಾ: ಮಿಂಚಿನ ಸಂಚಲನ ಮೂಡಿಸಿದ ರೋಡ್ ಶೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಡಲತಡಿ ಮಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಬಿಜೆಪಿ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.

ಮಂಗಳೂರು ಏರ್ ಪೋರ್ಟ್ ನಿಂದ ನಗರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ(ಲೇಡಿಹಿಲ್) ಗೆ ರಸ್ತೆ ಮಾರ್ಗ ಮೂಲಕ ಆಗಮಿಸಿದ ಪ್ರಧಾನಿ ಅವರು ಬೃಹತ್ ರೋಡ್ ಶೋ ಆರಂಭಿಸಿದ್ದಾರೆ.

ಮಂಗಳೂರು ನಗರದ ಲೇಡಿಹಿಲ್‌ನ ನಾರಾಯಣಗುರು ವೃತ್ತದಿಂದ ಲಾಲ್‌ಬಾಗ್, ಪಿವಿಎಸ್ ಆಗಿ ನವಭಾರತ ವೃತ್ತದವರೆಗೆ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಸಲಿದ್ದು,
ಪ್ರಧಾನಿ ಮೋದಿ ನೋಡಲು ಇಕ್ಕೆಲಗಳಲ್ಲೂ ಭಾರಿ ಸಂಖ್ಯೆಯಲ್ಲಿ ಸೇರಿದ ಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ತಮ್ಮ ಮೆಚ್ಚಿನ ವಿಶ್ವ ನಾಯಕನಿಗೆ ಪುಷ್ಪವೃಷ್ಟಿಗೈದರು.

ಎಲ್ಲೆಡೆ ಭಾರತ್‌ ಮಾತಾಕಿ ಜೈ, ಜೈ ಶ್ರೀ ರಾಮ್ ಘೋಷಣೆ ಮೊಳಗಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!