ಕತ್ತಿ ನಿಭಾಯಿಸಿದ್ದರು ಲೋಕೋಪಯೋಗಿ, ಬಂಧೀಖಾನೆ, ತೋಟಗಾರಿಕೆ, ಉಸ್ತುವಾರಿ ಖಾತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಉಮೇಶ್ ಕತ್ತಿ ಉದ್ಯಮ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದರು. ಅವರು ಸಕ್ಕರೆ ಕಂಪನಿಗಳ ಮಾಲಿಕರೂ ಹೌದು.
ಬೆಳಗಾವಿಯಲ್ಲಿರುವ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿವರೆಗೆ ಓದಿರುವ ಉಮೇಶ್ ಕತ್ತಿ, ಸಕ್ಕರೆ, ಲೋಕೋಪಯೋಗಿ, ಬಂಧೀಖಾನೆ, ತೋಟಗಾರಿಕೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಹಿತ ವಿವಿಧ ಸಚಿವಗಿರಿ ಸಮರ್ಥವಾಗಿ ನಿಭಾಯಿಸಿದ್ದವರು. ಅವರು ಪದೇ ಪದೇ ವಿವಾದಗಳಿಗೆ ಆಹಾರವಾಗುತ್ತಿದ್ದುದೂ ಸತ್ಯ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂದು ಅವರು ಬಹಿರಂಗವಾಗಿಯೇ ಹೇಳಿಕೆ ನಡುತ್ತಿದ್ದರು. ತಾನು ಸಚಿವ, ಡಿಸಿಎಂ ಮಾತ್ರ ಅಲ್ಲ, ಸಿಎಂ ಸ್ಥಾನದ ಆಕಾಂಕ್ಷಿಯೂ ಹೌದು ಎಂದು ಕೂಡಾ ಕತ್ತಿ ಬಹಿರಂಗವಾಗಿಯೇ ಹೇಳುತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!