ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕುಟುಂಬ ಮತ್ತು ಆಸ್ತಿಗಳನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟ ರಚಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಕಿಡಿಕಾರಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಪ್ರಮಾಣ ವಚನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ಎನ್ಡಿಎಗೆ ಮರಳಿರುವುದು ನಮಗೆಲ್ಲಾ ಸಂತೋಷದ ವಿಷಯವಾಗಿದೆ ಎಂದರು.
ಇಂಡಿಯಾ ಮೈತ್ರಿಕೂಟ ಅಪವಿತ್ರ ಮೈತ್ರಿ ಎಂದ ಅವರು, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವುದು ಅನ್ಯಾಯದ ಯಾತ್ರೆ, ಭಾರತ್ ತೋಡೋ ಯಾತ್ರೆಯಾಗಿದೆ. ಇಂಡಿಯಾ ಮೈತ್ರಿ ವಿಫಲವಾಗಿವೆ. ಇದು ಕೇವಲ ಕುಟುಂಬ – ಆಸ್ತಿಗಳನ್ನು ರಕ್ಷಿಸಲು ರಚಿಸಲಾದ ಮೈತ್ರಿಯಾಗಿದೆ. ಜೊತೆಗೆ ಇಂಡಿಯಾ ಮೈತ್ರಿಕೂಟ ಭ್ರಷ್ಟರ ಕೂಟವಾಗಿದೆ ಎಂದು ಕಿಡಿಕಾರಿದರು.
ಬಿಹಾರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯದಲ್ಲಿ ಅಭಿವೃದ್ಧಿಯ ವೇಗ ಗಣನೀಯವಾಗಿ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಹಾರದ ಎನ್ಡಿಎ ಡಬಲ್ ಇಂಜಿನ್ ಸರ್ಕಾರವು ತ್ವರಿತ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಹಾರವನ್ನು ಎನ್ಡಿಎ ಗೆಲ್ಲಲಿದೆ. ಬಿಹಾರದಲ್ಲಿ ನಾವು 40 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
#WATCH | On the INDIA alliance, BJP national president JP Nadda says, "We had said that INDI alliance is an unholy, unscientific alliance and it will not work. 'Anaya Yatra', 'Bharat Todo Yatra' and the INDI Alliance have failed conceptually. INDI alliance formed to protect… pic.twitter.com/zPBYhWzQmr
— ANI (@ANI) January 28, 2024