ದಿನಭವಿಷ್ಯ| ಅನವಶ್ಯ ವೆಚ್ಚ ಕಡಿಮೆ ಮಾಡಿ ಉಳಿತಾಯಕ್ಕೆ ಗಮನ ಕೊಡಬೇಕು

ಮೇಷ
ಅನವಶ್ಯ ವೆಚ್ಚ ಕಡಿಮೆ ಮಾಡಿ, ಉಳಿತಾಯಕ್ಕೆ ಗಮನ ಕೊಡಬೇಕು. ಭಾವನಾತ್ಮಕ ವಿಷಯ ವೊಂದು ಮನಸ್ಸನ್ನು ಕೊರೆಯುವುದು. ಆಪ್ತರ ಸಾಂತ್ವನ ಪಡೆಯಿರಿ.

ವೃಷಭ
ಅನಿರೀಕ್ಷಿತ ಪ್ರಸಂಗ ಎದುರಾದರೂ ನಿಮಗೆ ಪೂರಕವಾಗಿಯೇ ಇರುವುದರಿಂದ ಸಮಾಧಾನ. ಆಪ್ತೇಷ್ಟರ ಭೇಟಿ. ವೈಮನಸ್ಸು ದೂರವಾಗುವುದು.

ಮಿಥುನ
ನಿಮ್ಮ ಗುರಿಯತ್ತ ದಿಟ್ಟತೆಯಿಂದ ಸಾಗಿರಿ. ಮನಸ್ಸು ಅತ್ತಿತ್ತ ಸೆಳೆಯಲು ಹಲವು ವಿಷಯ ಇರಬಹುದಾದರೂ ಅದರಿಂದ ದೂರವಿರಿ.

ಕಟಕ
ಕಾಯುತ್ತಿರುವ ಶುಭಸುದ್ದಿ  ಇಂದು ಸಿಗಲಿದೆ. ಬಂಧುಗಳಿಂದ ನಿಮಗೆ ಲಾಭವಾಗಲಿದೆ.  ವೃತ್ತಿಯಲ್ಲಿ ಮುನ್ನಡೆ. ಸಮಸ್ಯೆಗಳು ಪರಿಹಾರ, ಧನವೃದ್ಧಿ.

ಸಿಂಹ
ಸಮಸ್ಯೆಗಳು ನಿಮ್ಮನ್ನು ಇಂದು ವಿಚಲಿತ ಗೊಳಿಸಲಾರವು. ಏಕೆಂದರೆ ಸಮಸ್ಯೆಗೆ ಸೂಕ್ತ ಪರಿಹಾರವೂ ನಿಮ್ಮಲ್ಲಿದೆ. ಕೌಟುಂಬಿಕ ಸಹಕಾರ.

ಕನ್ಯಾ
ಧನವೃದ್ಧಿ. ಆರ್ಥಿಕ ವಿಚಾರದಲ್ಲಿ ಅನುಕೂಲ ಬೆಳವಣಿಗೆ.  ಭಾವುಕ ಸನ್ನಿವೇಶವೊಂದು ಮನಸ್ಸು ಕಲಕಬಹುದು. ಕೌಟುಂಬಿಕ ಸಹಕಾರ.

ತುಲಾ
ಆಪ್ತರ ಕುರಿತಾದ ನಿಮ್ಮ ನಂಬಿಕೆಗೆ ದ್ರೋಹ ಬಗೆಯುವಂತಹ ಬೆಳವಣಿಗೆ ಸಂಭವಿಸಬಹುದು. ಯಾವುದಕ್ಕೂ ಮನಸ್ಸು ಗಟ್ಟಿಯಾಗಿರಲಿ.

ವೃಶ್ಚಿಕ
ನಿಭಾಯಿಸಲು ಕಠಿಣವೆನಿಸುವ ಸವಾಲು ಎದುರಾಗಬಹುದು. ಆದರೆ ದಿನದಂತ್ಯಕ್ಕೆ ಎಲ್ಲವೂ ನಿರಾಳವಾಗಿ ಕೊನೆಗೊಳ್ಳುವುದು. ಕೌಟುಂಬಿಕ ನೆಮ್ಮದಿ.

ಧನು
ಖಾಸಗಿ ಬದುಕಿನಲ್ಲಿ   ಪ್ರಮುಖ ಬೆಳವಣಿಗೆ  ಅವಶ್ಯ ಕೆಲಸಕ್ಕೆ  ಹಣ ಹೊಂದಾಣಿಸಬೇಕಾದ ಒತ್ತಡ. ಸೂಕ್ತ ಸಹಾಯಕ್ಕೆ ಎದುರು ನೋಡುವಿರಿ.

ಮಕರ
ಸ್ಪರ್ಧೆಯಲ್ಲಿ , ಪೈಪೋಟಿಯಲ್ಲಿ ನಿಮಗೆ ಯಾರೂ ಎದುರು ನಿಲ್ಲಲಾರರು. ಆದರೆ ಇದರಿಂದ  ಕೌಟುಂಬಿಕ ಭಿನ್ನಮತ ಉಂಟಾದೀತು.

ಕುಂಭ
ಇಂದು ಯಾವುದೇ ಸೋಲು, ಹಿನ್ನಡೆ ನಿಮ್ಮನ್ನು ಬಾಧಿಸದು. ಆದರೂ ತೃಪ್ತಿಯಿಲ್ಲ.  ಈ ದಿನ ನಿಮಗೆ ಬೇಸರ, ಏಕತಾನತೆ ಕಾಡಬಹುದು.

ಮೀನ
ಧಾರ್ಮಿಕ ವಿಚಾರ ದಲ್ಲಿ ಹೆಚ್ಚು ಆಸಕ್ತಿ ಮೊಳೆಯಬಹುದು. ಅದಕ್ಕೆ ನಿಮ್ಮ ಖಾಸಗಿ ಸಮಸ್ಯೆಗಳೂ ಕಾರಣ. ಅದಕ್ಕಾಗಿ ದೇವರ ಮೊರೆ ಹೋಗುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!