ಆಂಧ್ರ ರಾಜಕೀಯದಲ್ಲಿ ಹೊಸ ಅಲೆ: ಪವನ್ ಕಲ್ಯಾಣ್ ಬಿರುಸಿನ ಪ್ರಚಾರಕ್ಕೆ ಅಲ್ಲು ಅರ್ಜುನ್ ಸಾಥ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ವೈಸಿಆರ್‌ಪಿ (YSRP), ಇನ್ನೊಂದು ಕಡೆ ತೆಲುಗು ದೇಶಂ (TDP), ಜನಸೇನಾ ಪಾರ್ಟಿ (Janasena Party), ಬಿಜೆಪಿ ಅಬ್ಬರದ ಪ್ರಚಾರದಲ್ಲಿ ತೊಡಗಿವೆ.

ಪಕ್ಷಗಳಲ್ಲಿ ಸ್ಟಾರ್ ಕ್ಯಾಂಪೇನಿಂಗ್ ಸಹ ಜೋರಾಗಿದೆ. ಜನಸೇನಾ ಪಾರ್ಟಿ ಪವನ್ ಕಲ್ಯಾಣ್ (Pawan Kalyan) ಟೀಂ ಬಿರುಸಿನ ಮತಬೇಟೆ ನಡೆಸುತ್ತಿದೆ. ಇದಕ್ಕೆ ಮತ್ತಷ್ಟು ಬಲವಾಗಿ ಈಗ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಟ್ವೀಟ್ ಮೂಲಕ ರಾಜಕೀಯದಲ್ಲಿ ಉತ್ಸಾಹದ ಅಲೆ ತುಂಬಿದ್ದಾರೆ.

ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಅಲ್ಲು ಅರ್ಜುನ್ ಅವರು ಪವನ್ ಕಲ್ಯಾಣ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಪವನ್ ಕಲ್ಯಾಣ್ ಅವರ ದೃಢವಾದ ಮನೋಭಾವಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅಲ್ಲು ಅರ್ಜುನ್, ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಮಾವನ ಪರ ನಿಂತ ಅಲ್ಲು ಅರ್ಜುನ್ ಪ್ರತಿ ಹಂತದಲ್ಲೂ ಪವನ್ ಕಲ್ಯಾಣ್ ಜೊತೆಯಾಗಿ ಬೆಂಬಲಿಸುತ್ತೇನೆಂದು ಭರವಸೆ ನೀಡಿದ್ದಾರೆ.

ಐಕಾನ್ ಸ್ಟಾರ್ ಬೆಂಬಲದಿಂದ ಪವನ್ ಕಲ್ಯಾಣ್ ಅವರ ಚುನಾವಣಾ ಪ್ರಚಾರ ಮತ್ತಷ್ಟು ಹುರುಪು ಪಡೆದುಕೊಂಡಿದೆ. ಪವರ್ ಸ್ಟಾರ್ ಅಭಿಮಾನಿಗಳು, ಬನ್ನಿ ಅಭಿಮಾನಿಗಳು ಆಂಧ್ರ ಪ್ರದೇಶದ ಪವನ್ ಕಲ್ಯಾಣ ಗೆಲುವಿಗಾಗಿ ಪ್ರಚಾರ ನಡೆಸುತ್ತಿದ್ದಾರೆ.

‘ನಿಮ್ಮ ಚುನಾವಣಾ ಪಯಣಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ನೀವು ಆಯ್ಕೆ ಮಾಡಿದ ಮಾರ್ಗದ ಬಗ್ಗೆ ನಾನು ಯಾವಾಗಲೂ ಹೆಮ್ಮೆಪಡುತ್ತೇನೆ, ಜನರ ಸೇವೆಗಾಗಿ ನಿಮ್ಮ ಜೀವನವನ್ನು ಸಮರ್ಪಿಸಿದ್ದೀರಿ. ಕುಟುಂಬದ ಸದಸ್ಯನಾಗಿ, ನನ್ನ ಪ್ರೀತಿ ಮತ್ತು ಬೆಂಬಲ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ, ನೀವು ಬಯಸಿದ್ದೆಲ್ಲಾ ಸಾಧಿಸಬೇಕೆಂದು ನಾನು ಹಾರೈಸುತ್ತೇನೆ’ ಎಂದು ಎಕ್ಸ್ ನಲ್ಲಿ ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಮೇ 13ರಂದು ಚುನಾವಣೆ ನಡೆಯಲಿದ್ದು, ಪವನ್ ಕಲ್ಯಾಣ್ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!