ರಾಷ್ಟ್ರಪತಿ ಚುನಾವಣೆಗೆ ಮೈಸೂರಿನಿಂದ ಅಳಿಸಲಾಗದ ಶಾಹಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಷ್​​ (ಎಂಪಿವಿಎಲ್​)ನಲ್ಲಿ ತಯಾರಾಗುವ ಅಳಿಸಲಾಗದ ಶಾಹಿಯನ್ನು ಪೂರೈಸುವಂತೆ ಚುನಾವಣಾ ಆಯೋಗ ಪತ್ರ ಬರೆದು ಬೇಡಿಕೆ ಸಲ್ಲಿಸಿದ್ದು , ಶಾಹಿಯನ್ನು ಕಳುಹಿಸಿಕೊಡಲು ಸಂಸ್ಥೆ ಒಪ್ಪಿಗೆ ಸೂಚಿಸಿದೆ.
ನಗರದ ಎಂಪಿವಿಎಲ್​ನಲ್ಲಿ ತಯಾರಿಸುವ ಅಳಿಸಲಾಗದ ಶಾಹಿಯನ್ನು 2018ರ ರಾಷ್ಟ್ರಪತಿ ಚುನಾವಣೆಗೂ ಸಂಸ್ಥೆ ಪೂರೈಸಿತ್ತು. ಈ ಬಾರಿಯೂ ಮೈಸೂರು ಪೈಂಟ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆ ಅಳಿಸಲಾಗದ ಶಾಹಿಯುಳ್ಳ ಮಾರ್ಕರ್ ಪೆನ್​ಗಳನ್ನು ಸರಬರಾಜು ಮಾಡಲಿದೆ.
ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಮಾರ್ಕರ್ ಪೆನ್​ಗಳನ್ನು ಪೂರೈಸುವಂತೆ ಕೇಂದ್ರ ಚುನಾವಣಾ ಆಯೋಗವು ಪತ್ರ ಬರೆದು ಬೇಡಿಕೆ ಸಲ್ಲಿಸಿತ್ತು. ಅವರ ಬೇಡಿಕೆಯನ್ನು ಪೂರೈಸಲು ಸಮ್ಮತಿಸಿರುವ ಸಂಸ್ಥೆ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!