ಹೊಸದಿಗಂತ ಡಿಜಿಟಲ್ ಡೆಸ್ಕ್
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರಿಗೆ ಸಿಐಎಸ್ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಜವಾನರು ತುರ್ತು ಸಿಪಿಆರ್ ವೈದ್ಯಕೀಯ ಕಾರ್ಯವಿಧಾನದ ಮೂಲಕ ಜೀವ ಉಳಿಸಿದ್ದಾರೆ.
ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಎನ್ನುವುದು ತುರ್ತು ಜೀವ ಉಳಿಸುವ ವಿಧಾನವಾಗಿದ್ದು, ಹೃದಯ ಬಡಿತವನ್ನು ನಿಲ್ಲಿಸಿದಾಗ ನಡೆಸಲಾಗುತ್ತದೆ.
ಘಟನೆಯ ವಿಡಿಯೋವನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದೇವಧರ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “CISF ಜವಾನರ ತ್ವರಿತ ಕ್ರಮವು ಏರ್ ಪೋರ್ಟ್ ನಲ್ಲಿ ಒಂದು ಜೀವವನ್ನು ಉಳಿಸಿದೆ. ಈ ಮಹಾನ್ ಶಕ್ತಿಗೆ ಸೆಲ್ಯೂಟ್” ಎಂದು ಅವರು ಬರೆದಿದ್ದಾರೆ.
Prompt action of CISF Jawan's saved a life at @ahmairport.
Salute to this great force 🙏 pic.twitter.com/miBP4g8Ft6— Sunil Deodhar (@Sunil_Deodhar) December 22, 2022
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಅಹಮದಾಬಾದ್ ವಿಮಾನ ನಿಲ್ದಾಣವು, “ಆತ್ಮೀಯ ದೇವಧರ್ ಅವರೇ, ನಮ್ಮ ಸಿಐಎಸ್ಎಫ್ ಜವಾನರ ಕುರಿತಾದ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಅವರು ಯಾವಾಗಲೂ ಮಾನವೀಯತೆಯನ್ನು ಮಿಡಿಯುವ ಮೂಲಕ ರಾಷ್ಟ್ರ ಹೆಮ್ಮೆಪಡುವಂತೆ ಮಾಡುತ್ತಾರೆ. ಈ ವೀರರಿಗೆ ಕೃತಜ್ಞತೆಗಳು” ಎಂದು ಹೇಳಿದೆ.
ಸಿಐಎಸ್ಎಫ್ ಜವಾನರ ಮಾನವೀಯ ಕಾರ್ಯಕ್ಕೆ ನೇಟಿಜನ್ ಗಳು ಸೆಲ್ಯೂಟ್ ಮಾಡಿದ್ದಾರೆ. ಸಿಪಿಆರ್ ಯೋಧರ ಕಾಳಜಿಯ ಸ್ಪರ್ಶವನ್ನು ನೋಡಿ! ಸೈನಿಕರಿಗೆ ನಮಸ್ಕರಿಸುತ್ತೇನೆ! ಸಿಐಎಸ್ಎಫ್ ಬಗ್ಗೆ ಹೆಮ್ಮೆಯಿದೆ. ಅವರು ದೇಶಾದ್ಯಂತದ ಯಾವುದೇ ವಿಮಾನ ನಿಲ್ದಾಣಗಳಲ್ಲಿ ನೋಡಬಹುದಾದ ಅತ್ಯುತ್ತಮ ವೃತ್ತಿಪರರಾಗಿರುವುದರಿಂದ ಅವರ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
“CPR ಪ್ರತಿಯೊಬ್ಬರಿಗೂ ಕಡ್ಡಾಯ ಕೌಶಲ್ಯವಾಗಿರಬೇಕು. ಅದನ್ನು ಶಾಲೆಗಳಲ್ಲಿ ಕಲಿಸಬೇಕು. ಅದು ಸಂಕಷ್ಟದ ಸಂದರ್ಭಗಳಲ್ಲಿ ಜೀವರಕ್ಷಕ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
“ಸಿಐಎಸ್ಎಫ್ ತಂಡದಿಂದ ಅತ್ಯುತ್ತಮ ಕೆಲಸ. ಅವರ ಪ್ರಯತ್ನಗಳನ್ನು ಶ್ಲಾಘಿಸೋಣ. ಅವರಿಗೆ ಮತ್ತು ಅವರ ತರಬೇತಿ ತಂಡಕ್ಕೆ ಬಿಗ್ ಸೆಲ್ಯೂಟ್. ನಮ್ಮ ಶಸ್ತ್ರಾಸ್ತ್ರ ಪಡೆಗಳ ಬಗ್ಗೆ ತುಂಬಾ ಹೆಮ್ಮೆಯಿದೆ. ಭಾರತ್ ಮಾತಾ ಕಿ ಜೈ, ವಂದೇ ಮಾತರಂ” ಎಂದು ಇನ್ನೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.