ಭಾವಿಪತಿ ಎದುರೇ ಗೋಲಗುಮ್ಮಟದಿಂದ ಹಾರಿ ಪ್ರಾಣ ಬಿಟ್ಟ ಯುವತಿ, ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರದಲ್ಲಿ ಗೋಲಗುಮ್ಮಟ ಸ್ಮಾರಕದಿಂದ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಗೆ ಕಾರಣ ಈಗ ತಿಳಿದುಬಂದಿದೆ.

ವಿಜಯಪುರದ ಸೌಂದರ್ಯಗೆ ಸೊಲ್ಲಾಪುರದ ಯುವಕ ದಿನೇಶ್ ಜತೆ ಮದುವೆ ನಿಶ್ಚಯವಾಗಿತ್ತು. ಆದರೆ ಈ ಮದುವೆ ಸೌಂದರ್ಯಗೆ ಇಷ್ಟ ಇರಲಿಲ್ಲ. ಪೋಷಕರು ಎಲ್ಲಿಯೂ ಸೌಂದರ್ಯ ಮಾತಿಗೆ ಬೆಲೆಕೊಡದೆ ನಿಶ್ಚಿತಾರ್ಥ ಕೂಡ ನೆರವೇರಿಸಿದ್ದರು.

ಸೌಂದರ್ಯಳನ್ನು ಭೇಟಿ ಮಾಡಲು ದಿನೇಶ್ ವಿಜಯಪುರಕ್ಕೆ ಬಂದಿದ್ದು, ಗೋಲಗುಮ್ಮಟ ನೋಡಿಕೊಂಡು ಬನ್ನಿ ಎಂದು ಮನೆಯವರು ಇಬ್ಬರನ್ನೂ ಹೊರಗೆ ಕಳಿಸಿದ್ದಾರೆ. ಈ ವೇಳೆ ಗುಮ್ಮಟದ ಏಳನೇ ಅಂತಸ್ತಿನಿಂದ ಹಾರಿ ಸೌಂದರ್ಯ ಪ್ರಾಣ ಬಿಟ್ಟಿದ್ದಾಳೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!