ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲಕ್ಕೆ ಸಂಬಂಧಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಮನವಿ ತಿರಸ್ಕೃತಗೊಂಡಿದೆ.
2023-24 ರ ಆರ್ಥಿಕ ವರ್ಷದಲ್ಲಿ ಮಧ್ಯಂತರ ಪರಿಹಾರವಾಗಿ ಹೆಚ್ಚಿನ ಸಾಲಕ್ಕೆ ಅನುಮತಿಸಬೇಕು ಎಂಬ ಮನವಿಯನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಕೆ.ವಿಶ್ವನಾಥನ್ ಅವರಿದ್ದ ಪೀಠ ತಿರಸ್ಕರಿಸಿದೆ.
ತಕ್ಷಣವೇ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂಬ ಕೇರಳದ ಬೇಡಿಕೆ ಬಗ್ಗೆ ಯಾವುದೇ ಆದೇಶ ನೀಡದ ಸುಪ್ರೀಂ ಕೋರ್ಟ್, ರಾಜ್ಯವು ಹೊರಗಿನಿಂದ ಸಾಲ ಪಡೆಯುವ ಮಿತಿಯನ್ನು ಹೊಂದಿದೆಯೇ ಮತ್ತು ಕೇಂದ್ರವು ಇದರ ಮೇಲೆ ಎಷ್ಟು ನಿಯಂತ್ರಣ ಹೊಂದಿದೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದೆ.