ಹೊಸದಿಗಂತ ವರದಿ, ವಿಜಯಪುರ:
ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, 12.50 ಲಕ್ಷ ರೂ. ದೋಚಿದ ಮೂರು ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ಜಿಲ್ಲೆ ಚಡಚಣ ಪಟ್ಟಣದಲ್ಲಿ ನಡೆದಿದೆ.
ಸೊಲ್ಲಾಪುರ ಜಿಲ್ಲೆಯ ಸಾಂಗೋಲೆ ಗ್ರಾಮದ ರಂಜಿತ ಕಾಳೆ, ವಿಠ್ಠಲ್ ಘೂಲೆ, ಸಚಿನ್ ಶಿರಕೆ ಬಂಧಿಯ ಆರೋಪಿಗಳು.
ಈ ಆರೋಪಿಗಳು, ಚಂದ್ರಕಾಂತ ಮಸ್ಕೆ ಎಂಬ ವ್ಯಾಪಾರಿ ವಾಹನದಲ್ಲಿ ತಮ್ಮ ಅಂಗಡಿಗೆ ವಸ್ತುಗಳನ್ನು ಖರೀದಿಸಿ ತರಲು ಹೋಗುತ್ತಿದ್ದ ವೇಳೆ, ವಾಹನ ತಡೆದು ಬೆದರಿಸಿ, ಕಣ್ಣಿಗೆ ಖಾರದ ಪುಡಿ ಎರಚಿ, 12.50 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.