ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ನಗದು ಬಹುಮಾನ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್​ ದಾಳಿ ಬೆನ್ನಲ್ಲೇ ಪ್ರತೀಕಾರದ ಮಾತುಗಳು ಜೋರಾಗಿದೆ. 26 ಪ್ರವಾಸಿಗರ ಪ್ರಾಣ ತೆಗೆದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರತೀಕಾರ ಶುರುವಾಗಿದೆ.

ಮತ್ತೊಮ್ಮೆ ಪಾಕಿಸ್ತಾನದ ಭಯೋತ್ಪಾದಕರಿಂದ ಭಾರತದ ಮೇಲೆ ದಾಳಿಯಾಗಿದೆ. ಈಗಾಗಲೇ ದಾಳಿ ನಡೆಸಿದ ಉಗ್ರ ಸಂಘಟನೆ ಯಾವುದೆಂದು ಸ್ಪಷ್ಟವಾಗಿದೆ. ದಾಳಿ ನಡೆಸಿದ ಉಗ್ರರ ಫೋಟೋ ಸ್ಕೆಚ್ ರೀಲೀಸ್ ಆಗಿದೆ. ದಾಳಿ ನಡೆಸಿದ ಉಗ್ರರಿಗೆ ಅವರದ್ದೇ ಮಾರ್ಗದಲ್ಲಿ ಉತ್ತರ ನೀಡಲು ಸಮಯ ಬಂದಿದೆ.

ಇನ್ನು ಇದಕ್ಕೆ ಸಂಬಂಧಪಟ್ಟಂತೆ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಅನಂತನಾಗ್ ಪೊಲೀಸರು ಇದೀಗ ಘೋಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!