ಕರ್ನಾಟಕ VS ಪಂಜಾಬ್ ರಣಜಿ ಪಂದ್ಯ | ವಿ. ಕೌಶಿಕ್ ಗೆ 5 ವಿಕೆಟ್ : ಸಂಕಷ್ಟದಲ್ಲಿ ಪಂಜಾಬ್

ಹೊಸದಿಗಂತ ವರದಿ ಹುಬ್ಬಳ್ಳಿ:

ಕರ್ನಾಟಕ ತಂಡದ ಬೌಲರ್ ವಿ. ಕೌಶಿಕ್ ಅವರು ಐದು ವಿಕೆಟ್ ಗೊಂಚಲು ಪಡೆದು ಸಂಭ್ರಮಿಸಿದರು.

ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ಆರಂಭವಾದ ಕರ್ನಾಟಕ ಹಾಗೂ ಪಂಜಾಬ ನಡುವಿನ ರಣಜಿ ಪಂದ್ಯಕ್ಕೆ ಮೊದಲ ದಿನ ಊಟದ ವೇಳೆಗೆ ಪಂಜಾಬ್ ತ‌ಂಡ 32 ಓವರ್ ಗೆ ತನ್ನ 5 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಕೌಶಿಕ್ ಬಿಟ್ಟರೆ ಕರ್ನಾಟಕ ಯಾವುದೇ ಬೌಲರ್ ವಿಕೆಟ್ ಪಡೆಯಲಿಲ್ಲ.
ವಿ. ಕೌಶಿಕ್ ವಿಕೆಟ್ ( 1 , 28 ರನ್, 11 ಓವರ್) ಅಮೋಘ ಬೌಲಿಂಗ್ ಮಾಡಿದರು. ಮೊದಲನೇ ಸ್ಪೇಲನ್ ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದ ಅವರು ಎರಡನೇ ಸ್ಪೇಲನ್ 2.5 ಬೌಲಿಂಗ್ ನಲ್ಲಿ ಗೀತಾಂಶ ಖೇರ ಅವರ ವಿಕೆಟ್ ಪಡೆದರು. ಮನೀಷ್ ಪಾಂಡೆ ಸ್ಲೀಪ್ ನಲ್ಲಿ ಕ್ಯಾಚ್ ಪಡೆದರು.

ಪಂಜಾಬ್ ತಂಡ 15 ಓವರ್ ಗೆ 37/4 ವಿಕೆಟ್ ಕಳೆದು ಕೊಂಡಾಗ ಗೀತಾಂಶ ಖೇರಾ ಹಾಗೂ ನೇಹಾಲ್ ವಂಧೇರಾ ಕೆಲ ಹೊತ್ತು ಕರ್ನಾಟಕ ಬೌಲರ್ ಕಾಡಿದರು. ಇಬ್ಬರು ಜೊತೆಯಾಟ 50 ರನ್, 88 ರನ್ ಗಳಿಸಿದರು. ನೇಹಾಲ್ ವಧೇರಾ ( 27 ರನ್, 44 ಎಸೆತ, 5 ಫೋರ್ ) ಪ್ರೀರಿತ್ ದತ್ತಾ (8ರನ್, 7ಎಸೆತ್ 2 ಫೋರ್,) ಗಳಿಸಿ ಸ್ಕ್ರೀಜ್ ನಲ್ಲಿ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!