ತನ್ನ ಸಂಪಾದನೆಯ 600 ಕೋಟಿ ರೂ. ಬಡವರಿಗೆ ದಾನ ಮಾಡಿದ್ರು ಈ ಡಾಕ್ಟರ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೇಗೆ, ಎಷ್ಟು ಕೂಡಿಡಲು ಸಾಧ್ಯ ಎಂದು ಲೆಕ್ಕಾಚಾರ ಹಾಕುವ ಇಂದಿನ ದಿನಗಳಲ್ಲಿ ಇಲ್ಲೊಬ್ಬರು ತಾವು ಗಳಿಸಿದ ಆಸ್ತಿಯಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿಗಳನ್ನು ಬಡವರಿಗೆ ದಾನ ನೀಡಿದ್ದಾರೆ.

ಉತ್ತರ ಪ್ರದೇಶದ ನಿವಾಸಿ, ವೃತತಿಯಲ್ಲಿ ವೈದ್ಯರಾಗಿರುವ ಅರವಿಂದ ಕುಮಾರ್ ಗೋಯೆಲ್ ಈ ದಾನಿ. ಇವರು ತಮ್ಮ 50 ವರ್ಷಗಳ ವೃತ್ತಿ ಜೀವನದಲ್ಲಿ ಗಳಿಸಿರುವ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದುಕೊಟ್ಟು, ಬಡವರಿಗೆ ವಿನಿಯೋಗಿಸಲು ಮನವಿ ಮಾಡಿದ್ದಾರೆ.

ಅಸಮಾನ್ಯ ಜನಪರ ಕಾಳಜಿ ಹೊಂದಿರುವ ಅರವಿಂದ ಕುಮಾರ್, ಕೋವಿಡ್ ಕಾಲದ ಲಾಕ್‌ಡೌನ್ ಸಮಯದಲ್ಲೂ ಬಡವರಿಗೆ ನೆರವಾಗಿದ್ದರು. ಮೊರಾದಾಬಾದ್‌ನ 50 ಹಳ್ಳಿಗಳನ್ನು ದತ್ತು ಪಡೆದಿರುವ ಅವರು, ಅಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು.
ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯೊಂದಿಗೆ ನೆಮ್ಮದಿಯ ಜೀವನ ಕಾಣುತ್ತಿರುವ ಅರವಿಂದ್, ಕಳೆದ 25 ವರ್ಷದ ಹಿಂದೆಯೇ ಆಸ್ತಿ ದಾನದ ನಿರ್ಧಾರಕ್ಕೆ ಬಂದಿದ್ದರಾದರೂ, ಕೆಲವು ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ನನ್ನ ಆಸೆ ಈಗ ನೆರವೇರಿದೆ ಎನ್ನುತ್ತಾರೆ ಅವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!