ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ಬಿಹಾರದ ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.
ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದ 20 ದಿನಗಳಲ್ಲಿ ಉದ್ಯೋಗ ಖಾತರಿಪಡಿಸುವ ಹೊಸ ಕಾನೂನನ್ನು ಪರಿಚಯಿಸಲಾಗುವುದು ಎಂದು ಹೇಳಿದರು. ಅಧಿಕಾರ ವಹಿಸಿಕೊಂಡ 20 ತಿಂಗಳೊಳಗೆ ಈ ಯೋಜನೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಗೆ ತರಲಾಗುವುದು. 20 ತಿಂಗಳಲ್ಲಿ ಒಂದೇ ಒಂದು ಮನೆಯೂ ಸರ್ಕಾರಿ ಉದ್ಯೋಗವಿಲ್ಲದೆ ಇರುವುದಿಲ್ಲ ಎಂದು ಹೇಳಿದರು.
ಭರವಸೆಗೆ ದತ್ತಾಂಶ ಬೆಂಬಲವಿದೆ, ಇದು ನನ್ನ ಪ್ರತಿಜ್ಞೆ. ಇದನ್ನು ಮಾಡಲು ಸಾಧ್ಯವಿದೆ. ಇದು ಜುಮ್ಲೆಬಾಜಿ ಅಲ್ಲ. ಬಿಹಾರದ ಜನರು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಜೊತೆಗೆ, ನಾವು ಬಿಹಾರದ ಜನರಿಗೆ ಆರ್ಥಿಕ ನ್ಯಾಯವನ್ನು ಸಹ ಖಚಿತಪಡಿಸುತ್ತೇವೆ. ಇದನ್ನು ಸಾಧಿಸಬಹುದು, ಇದಕ್ಕೆ ದೃಢಸಂಕಲ್ಪ ಮಾತ್ರ ಬೇಕಾಗುತ್ತದೆ. ಎನ್ಡಿಎ ನಮ್ಮ ಘೋಷಣೆಗಳನ್ನು ನಕಲಿಸಿದ್ದಾರೆ ಎಂದು ತಿಳಿಸಿದರು.