Tuesday, October 28, 2025

ವಿಜಯಪುರದಲ್ಲಿ ಸಾರಿಗೆ ಬಸ್ ಹರಿದು ಎರಡು ವರ್ಷದ ಬಾಲಕ ಸಾವು

ಹೊಸ ದಿಗಂತ ವರದಿ,ವಿಜಯಪುರ:

ಸಾರಿಗೆ ಬಸ್ ಹಾಯ್ದು ಎರಡು ವರ್ಷದ ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ವಿಜಯಪುರ ತಾಲೂಕಿನ ಕುಮಟಗಿ ಬಸ್ ಸ್ಟಾಪ್ ಬಳಿ ನಡೆದಿದೆ.

ಇಲ್ಲಿನ ರಾಘವೇಂದ್ರ ತಳವಾರ (2) ಮೃತ ಬಾಲಕ.

ಈ ದುರ್ಘಟನೆಯಿಂದ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!