ಹೊಸದಿಗಂತ ವರದಿ, ಮಂಗಳೂರು:
ನಗರ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದ ಕಾಡೆಮ್ಮೆ ‘ಬಾಹುಬಲಿ’ ಮತ್ತು ‘ಅನುಷ್ಠ’ ಒಂದು ಗಂಡು ಕರುವಿಗೆ ಜನ್ಮ ನೀಡಿದೆ. ತಾಯಿ ಮತ್ತು ಕರು ಆರೋಗ್ಯಕರವಾಗಿದೆ. ಈ ಹಿಂದೆ 2020 ಸಾಲಿನಲ್ಲಿ ‘ಪಾರೋಲು’ ಎಂಬ ಹೆಣ್ಣು ಕರುವಿಗೆ ಜನ್ಮ ನೀಡಿತ್ತು.
‘ಬಾಹುಬಲಿ’ ಮತ್ತು ‘ಅನುಷ್ಠ’ ತಮಿಳುನಾಡಿನ ವಂಡಲೂರು ಮೃಗಾಲಯದಿಂದ ಹಾಗೂ ‘ಮಹಿಷ’ ಮತ್ತು ‘ಮಹಿಷಿ’ ಯನ್ನು ಮೈಸೂರು ಮೃಗಾಲಯದಿಂದ ಪ್ರಾಣಿ ವಿನಿಮಯದ ಮುಖೇನ ತರಿಸಲಾಗಿತ್ತು. ಈಗ ಪಿಲಿಕುಳದಲ್ಲಿ ಒಟ್ಟು ಆರು ಕಾಡುಕೊಣಗಳಿವೆ.
ಕಾಡುಕೊಣಗಳು ಅಳಿವಿನಂಚಿನಲಿರುವ ಪ್ರಾಣಿಗಳ ಸಾಲಿಗೆ ಸೇರಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್. ಜೆ. ಭಂಡಾರಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ