ಅಸ್ಸಾಂ-ಮೇಘಾಲಯ ಗಡಿ ವಿವಾದ: ಗೃಹ ಸಚಿವ ಅಮಿತ್‌ ಶಾʼರನ್ನು ಭೇಟಿ ಮಾಡಲಿರುವ ರಾಜ್ಯದ ಸಿಎಂಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಸ್ಸಾಂ ಹಾಗೂ ಮೇಘಾಲಯ ನಡುವಿನ ಅಂತಾರಾಜ್ಯ ಗಡಿ ಬಿಕ್ಕಟ್ಟು ನಿವಾರಿಸಲು ಇಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲಿದ್ದಾರೆ.
ಬುಧವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಕೌಂಟರ್‌ ಪಾರ್ಟ್‌ ಕರ್ನಾಡ್‌ ಕೆ. ಸಂಗ್ಮಾ ಅವರು ಉಭಯ ರಾಜ್ಯಗಳ ಸಂಪುಟ ಸಭೆ ನಡೆಸಿದರು.
ಎರಡು ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತು ಕೇಂದ್ರ ಸಚಿವರಿಗೆ ತಿಳಿಸುವುದಾಗಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಉಭಯ ರಾಜ್ಯಗಳ 12 ಅಂತರ್‌ ಜಿಲ್ಲೆಗಳ ಗಡಿ ವಿವಾದದ ಪೈಕಿ ಅಸ್ಸಾಂನ ಕ್ಯಾಚರ್, ಕಾಮ್ರೂಪ್ ಮತ್ತು ಕಾಮ್ರೂಪ್ ಜಿಲ್ಲೆಗಳು ಮತ್ತು ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್, ರಿಭೋಯಿ ಮತ್ತು ಪೂರ್ವ ಜೈನ್ತಿಯಾ ಜಿಲ್ಲೆಗಳ ಬಗ್ಗೆ ಮೊದಲು ಚರ್ಚೆಯಾಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಒತ್ತಾಯಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!