ಹೊಸದಿಗಂತ ವರದಿ,ಕಲಬುರಗಿ
ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಮಹಾಸ್ವಾಮಿಗಳು, ತ್ರಿವಿಧ ದಾಸೋಹಗಳನ್ನು ನಡೆಸಿದ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನವನ್ನು “ದಾಸೋಹ ದಿನ” ಎಂದು ಆಚರಿಸುವುದಾಗಿ ಪ್ರಕಟಿಸಿ ಅವರಿಗೆ ಗೌರವ ಸಮರ್ಪಿಸಿದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟ ಮತ್ತು ಸಚಿವರಿಗೆ ಬಿಜೆಪಿ ರಾಜ್ಯ ವಕ್ತಾರರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ಧನ್ಯವಾದ ಸಮರ್ಪಿಸಿದ್ದಾರೆ.
ರಾಜ್ಯದ ಬಿಜೆಪಿ ಸರಕಾರವು ಶ್ರೀಗಳವರ ದಾಸೋಹದ ಆದರ್ಶದಂತೆ ಅನ್ನ, ಆಶ್ರಯ ಮತ್ತು ವಿದ್ಯಾ ದಾಸೋಹಕ್ಕೆ ಆದ್ಯತೆ ನೀಡುವ ಮೂಲಕ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಮಹಾಸ್ವಾಮಿಗಳು, ತ್ರಿವಿಧ ದಾಸೋಹಗಳನ್ನು ನಡೆಸಿದ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸುವುದಾಗಿ ರಾಜಕುಮಾರ ಪಾಟೀಲ ತೆಲ್ಕೂರ ಅವರು ತಿಳಿಸಿದ್ದಾರೆ.