ಹೊಸದಿಗಂತ ವರದಿ,ಹುಬ್ಬಳ್ಳಿ:
ಕೊರೋನಾ ಬಗ್ಗೆ ಜನಸಾಮಾನ್ಯರು ಜಾಗೃತರಾಗಬೇಕಿದೆ ಎಂದು ಗೋಕುಲ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಹೇಳಿದರು.
ಎನ್ಕೆ ಎಂಪಿಎಸ್ ನಿರ್ಮಾಣದ ಮತ್ತೆ ಲಾಕ್ಡೌನ್ ಎಂಬ ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಇದೀಗ ಕೊರೋನಾ ಓಡಿಸಲು ಎಲ್ಲ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಂಡಿವೆ. ಜನರಲ್ಲಿ ತಿಳಿವಳಿಕೆ ಮೂಡಿದೆ. ಹೀಗಾಗಿ ಎಚ್ಚರಿಕೆಯಿಂದ ಇದ್ದರೆ ಕೊರೋನಾ ಗೆಲ್ಲಬಹುದು. ದೇಶದ ಆರ್ಥಿಕ ಸ್ಥಿತಿ ಏರುಪೇರಾ ಗುತ್ತದೆ. ಅದಕ್ಕಾಗಿ ಎಚ್ಚರಿಕೆಯೊಂದೆ ಇದಕ್ಕೆ ಸಮರ್ಪಕವಾದ ಮದ್ದು ಎಂದು ಹೇಳಿದರು.
ಪುನೀತ್ಗೆ ಅರ್ಪಣೆ : ಚಿತ್ರ ನಿರ್ದೇಶಕ ಬಾಬು ಮಾತನಾಡಿ, ಈ ಕಿರುಚಿತ್ರವನ್ನು ನಟ ಪುನೀತ್ ರಾಜಕುಮಾರ ಅವರಿಗೆ ಅರ್ಪಿಸಿದ್ದು, ನಟ ಶಂಕನಾಗ್ ಹೇಳಿದ ಸತ್ತ ಮೇಲೆ ಮಲಗುವುದು ಇದ್ದೇ ಇದೆ. ಬದುಕಿದ್ದಾಗ ಏನನ್ನಾದರೂ ಸಾಸು ಎಂಬ ಮಾತಿನೋದಿಗೆ ಚಿತ್ರ ಆರಂಭವಾಗುತ್ತದೆ ಎಂದರು.
ಡಾ.ವೀರೇಶ್ ಹಂಡಿಗಿ,ನಿರ್ದೇಶಕ ಬಾಬಾ, ನಟ ವಿಕ್ರಂ ಕುಮಟಾ ಇದ್ದರು.