ದಿಗಂತ ವರದಿ ಬನವಾಸಿ:
ಸ್ಥಳೀಯ ಇತಿಹಾಸ ಪುರಾತನ ಶ್ರೀ ಮಧುಕೇಶ್ವರ ಮತ್ತು ಸಮೀಪದ ಗುಡ್ನಾಪೂರ ಶ್ರೀ ಬಂಗಾರೇಶ್ವರ ದೇವಸ್ಥಾನಕ್ಕೆ ಶಿವರಾತ್ರಿಯ ಪ್ರಯುಕ್ತ ಮಂಗಳವಾರ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಕುಟುಂಬ ಸಮೇತರಾಗಿ ಆಗಮಿಸಿ ವಿಷೇಶ ಪೂಜೆ, ಅಭಿಷೇಕ ನೆರವೇರಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಸಚಿವರರಿಗೆ ಸತ್ಕರಿಸಿ ಪ್ರಸಾದ ವಿತರಣೆ ಮಾಡಿದರು.