ಸಿಎಸ್ ಕೆ ನಾಯಕತ್ವ ತ್ಯಜಿಸಿದ ಧೋನಿ! ನೂತನ ಕ್ಯಾಪ್ಟನ್‌ ಆಗಿ ಸ್ಟಾರ್‌ ಆಲ್‌ರೌಂಡರ್‌ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ 15ನೇ ಆವೃತ್ತಿ ಆರಂಭಕ್ಕೆ ಇನ್ನೆರಡು ದಿನವಷ್ಟೇ ಬಾಕಿಯಿದೆ. ಈ ನಡುವೆ ಚನ್ನೈ ಸೂಪರ್‌ ಕಿಂಗ್ಸ್‌ ಪ್ರಾಂಚೈಸಿಯು ಅಭಿಮಾನಿಗಳಿಗೆ ಬಹುದೊಡ್ಡ ಅಚ್ಚರಿಯೊಂದನ್ನು ನೀಡಿದೆ.
2008 ರಿಂದಲೂ ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿಚಾರವನ್ನುಸಿಎಸ್​ಕೆ ಆಡಳಿತ ಮಂಡಳಿ ಟ್ವಿಟರ್‌ ಮೂಲಕ ತಿಳಿಸಿದೆ. ಇದರ ಜೊತೆಗೆ ನೋತನ ಕಪ್ತಾನ ನ ಘೋಷಣೆಯನ್ನೂ ಮಾಡಲಾಗಿದೆ. ತಂಡದ ನಾಯಕನಾಗಿ ಸ್ಟಾರ್‌ ಆಲ್ರೌಂಡರ್‌ ಜಡೇಜಾ ನೇಮಕಗೊಂಡಿದ್ದಾರೆ.
ಸಿಎಸ್ಕೆ ತಂಡದ ಬೌಲಿಂಗ್‌ ಬ್ಯಾಟಿಂಗ್‌ ಆಧಾರಸ್ತಂಭವಾಗಿರುವ ಜಡೇಜಾ, ಸಿಎಸ್‌ಕೆಯನ್ನು ನಾಯಕತ್ವ ವಹಿಸುತ್ತಿರುವ ಮೂರನೇ ಆಟಗಾರನಾಗಲಿದ್ದಾರೆ. ಧೋನಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲಿ ಮುಂದುವರೆಯುತ್ತಾರೆ ಎಂದು ಪ್ರಾಂಚೈಸಿಯು ಮಾಹಿತಿ ನೀಡಿದೆ. ಧೋನಿ ನಾಯಕತ್ವ ತೊರೆದ ದಿಢೀರ್‌ ನಿರ್ಧಾರ ಅಭಿಮಾನಿಗಳಿಗೆ ಶಾಕ್‌ ಮೂಡಿಸಿದೆ. ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ತಂಡ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!