ನನ್ನನ್ನ ಶೂಟ್ ಮಾಡಿ, ಅಥ್ವಾ ಜೈಲಿಗೆ ಕಳಿಸಿ: ಸಂಜಯ್ ರಾವತ್

ಹೊಸದಿಗಂತ ಡಿಜಿಟಲ್ ಡೆಸ್ಕ್

ನನ್ನನ್ನ ಶೂಟ್ ಮಾಡಿ ಅಥ್ವಾ ಜೈಲಿಗೆ ಕಳಿಸಿ, ನಾನು ಹೆದರುವವನಲ್ಲ.. ಈ ರೀತಿ ಹೇಳಿದ್ದು, ಸಂಸದ ಸಂಜಯ್ ರಾವತ್ .
ತಮ್ಮ ಆಸ್ತಿಯನ್ನು ಇಡಿ ಇಲಾಖೆ ಮುಟ್ಟುಗೋಲು ಹಾಕಿಕೊಂಡ ಹಿನ್ನೆಲೆ ಆಕ್ರೋಶಗೊಂಡ ಶಿವಸೇನೆ ಮುಖಂಡ , ಸಂಸದ ಸಂಜಯ್ ರಾವತ್, ‘ನಾನು ಬಾಳಾಸಾಹೇಬ್ ಠಾಕ್ರೆ ಅವರ ಅನುಯಾಯಿ ಮತ್ತು ಶಿವಸೈನಿಕ, ನಾನು ಹೋರಾಡುತ್ತೇನೆ ಮತ್ತು ಎಲ್ಲರನ್ನೂ ಬಹಿರಂಗಪಡಿಸುತ್ತೇನೆ ಎಂದರು..
ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಅಲಿಬಾಗ್‌ನಲ್ಲಿರುವ ಎಂಟು ಭೂ ಪಾರ್ಸೆಲ್‌ಗಳು ಮತ್ತು ಮುಂಬೈನ ದಾದರ್ ಉಪನಗರದ ಫ್ಲ್ಯಾಟ್ʼನ್ನ ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!