ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿಯಲ್ಲಿ ಸಾಕಷ್ಟು ಅಕ್ರಮ ಮನೆಗಳಿದ್ದರೂ, ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ನಗರಸಭೆಯಿಂದ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಚಿತ್ರ ಕಲಾವಿದ ಸಂದೀಪ್ ಮಡಿಕೇರಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಸಾಕಷ್ಟು ಅಕ್ರಮ ಮನೆಗಳಿದ್ದು, ಸಾಮೂಹಿಕವಾಗಿ ತೆರವುಗೊಳಿಸಬೇಕು. ಅದನ್ನು ಬಿಟ್ಟು ಕೆಲವರನ್ನು ಗುರಿಯಾಗಿಸುವುದು ಸರಿಯಾದ ಕ್ರಮವಲ್ಲ ಎಂದರು. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದರಿಂದ ನಾನು ನಡೆಸುತ್ತಿರುವ ಆರ್ಟ್ ಗ್ಯಾಲರಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ನಗರಸಭೆಯವರು ಮನೆ ತೆರವುಗೊಳಿಸಲು ಬಂದಾಗ ಸುಮಾರು ರೂ.20 ಸಾವಿರ ಬೆಲೆಯ ಕಲಾಕೃತಿ ನಾಶವಾಗಿದೆ ಎಂದು ಆರೋಪಿಸಿದರು. ನಗರಸಭೆಯಿಂದ ನಾನು ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯ ನೀಡದೆ ತೊಂದರೆ ನೀಡಿದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.