ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಸಹೋದರರು ಕಣ್ಮರೆ

ಹೊಸದಿಗಂತ ವರದಿ ವಿಜಯಪುರ: 

ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಅಣ್ಣ- ತಮ್ಮರಿಬ್ಬರು ಕಣ್ಮರೆಯಾದ ಘಟನೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಹತ್ತಿರ ನಡೆದಿದೆ.ಬಳೂತಿ ಗ್ರಾಮದ ಬಸವರಾಜ ಮಳಿಯಪ್ಪ ದಳವಾಯಿ(24) ಹಾಗೂ ಅಜೀತ ಮಳಿಯಪ್ಪ ದಳವಾಯಿ(20) ಕಣ್ಮರೆಯಾದ ಸಹೋದರರು.

ಈ ಸಹೋದರರಿಬ್ಬರು, ಮಂಗಳವಾರ ಸಂಜೆ ಮೀನು ಹಿಡಿಯಲು ನದಿಯಲ್ಲಿ ತೆರಳಿದ್ದಾಗ ಜೋರಾದ ಗಾಳಿಯಿಂದಾಗಿ ತೆಪ್ಪ ಮುಗಿಚಿ ಬಿದ್ದ ಬಳಿಕ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರೂ ನೀರಿನಲ್ಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ನಾಪತ್ತೆಯಾಗಿರುವ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!