ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಎಲಮಂಚಿಲಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಮಗಳು ಸಾವನ್ನಪ್ಪಿದ್ದು, ಮತ್ತೊಬ್ಬ ಮಗಳು ಮತ್ತು ಮಗ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ. ಮೃತರನ್ನು ಚಿಂಟು ಚಿನಮಣಿ (45) ಪುತ್ರಿ ಜಾಹ್ನವಿ (18) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ವೆಂಕಟ ಸಾಯಿ ಸುಶಾಂಕ್ (15) ಮತ್ತು ಶ್ರೀ ರಂಜಿನಿ ಎಂದು ಗುರುತಿಸಲಾಗಿದ್ದು, ಅವರನ್ನು ವಿಶಾಖಪಟ್ಟಣದ ಪಿನಾಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ತಿಯಲ್ಲಿ ಪಾಲು ನೀಡಲು ತನ್ನ ಅತ್ತೆ ನಿರಾಕರಿಸಿದ ಆರೋಪದ ಮೇಲೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ (ಎಸ್ಐ) ಪಾರಿ ನಾಯ್ಡು ತಿಳಿಸಿದ್ದಾರೆ. ಮಹಿಳೆ ಪಾಲಿನ ಆಸ್ತಿಯನ್ನು ಅತ್ತೆ ತನ್ನ ಮಗಳಿಗೆ ಬರೆಯಲು ಮುಂದಾಗಿದ್ದರೆಂದು ಆಸ್ಪತ್ರೆಯಲ್ಲಿರುವ ರಂಜನಿಯಿಂದ ಪೊಲೀಸರು ಸ್ಟೇಟ್ಮೆಂಟ್ ಪಡೆದಿದ್ದಾರೆ. ರಂಜಿನಿ ಹೇಳಿಕೆಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.