ಹೊಸದಿಗಂತ ವರದಿ, ಕಲಬುರಗಿ:
ಪಿಎಸ್ಐ ನೇಮಕಾತಿ ಅಕ್ರಮ ಮುಚ್ಚಿ ಹಾಕಲು ಮಧ್ಯ ರಾತ್ರಿ ಕಲಬುರಗಿ ಕಡೆ ಬಂದ ಗೃಹ ಸಚಿವ ಆರಗ ಜ್ಞಾನೆಂದ್ರ
ರವರಿಗೆ ಶುಕ್ರವಾರ ನಗರದ ಗ್ರ್ಯಾಂಡ್ ಹೋಟೆಲ್ ಬಳಿ ಕಲಬುರಗಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡಿದರು.
ಈ ಮೂಲಕ ಕೆಟ್ಟ ಸರ್ಕಾರದ ಅವಧಿಯಲ್ಲಿ ಭೃಷ್ಟಚಾರ ದಲ್ಲಿ ತೊಡಗಿದವರಿಗೆ ರಕ್ಷಣೆ ಮಾಡುವ ಸರ್ಕಾರದ ಧೋರಣೆ ಖಂಡಿಸಲಾಯಿತು.
ಹಗರಣ ಬೈಲಿಗೆ ತಂದ ಮಾಜಿ ಸಚಿವರು ಕೆಪಿಸಿಸಿ ವಕ್ತಾರರು ಶಾಸಕರಾದ ಪ್ರಿಯಾಂಕ್ ಖರ್ಗೆ ರವರಿಗೆ ನೊಟೀಸ್ ನೀಡುವ ಮೂಲಕ ಸರ್ಕಾರ ತನ್ನ ಭೃಷ್ಟಚಾರ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದು, ಇದನ್ನು ಖಂಡಿಸಿ ಕಲಬುರಗಿ ನಗರದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಯಿತು.
ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈರಣ್ಣ ಪಾಟೀಲ್ ಝಳಕಿ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲತಾ ರವಿ ರಾಠೋಡ, ಆನಂದ ಪಾಟೀಲ್ ಸರಡಗಿ, ಪರಶುರಾಮ ನಾಟಿಕಾರ್, ಅಮರ್ ಶಿರವಾಳ ,ಅಶೋಕ್ ಕಪ್ನೂರ್, ಗೌತಮ್ ಮಹಿಂದ್ರ, ಸಂತೋಷ್ ಯಾದವ್ ,ವಿಘ್ನೇಶ್ ಕುಮಾರ್, ಗೀತಾ ಮುದುಗಲ್, ಮಹಾನಗರ ಪಾಲಿಕೆ ಸದಸ್ಯರಾದ ಪ್ರಿಯಾಂಕಾ ಹೊಳ್ಕರ್ ಶರಣು ಕಲಶೆಟ್ಟಿ ಮಂಜುಳಾ ಪಾಟೀಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಕಾಯ೯ಕತ೯ರನ್ನು ಬಂಧಿಸಲಾಯಿತು.