ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಹಾಗೂ ಅವರ ಪತ್ನಿ ಶುಕ್ರವಾರ ಭೇಟಿ ನೀಡಿದರು.
ಕ್ಷೇತ್ರದ ಸ್ವಚ್ಛತೆ ಪ್ರಶಾಂತ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಗೋಶಾಲೆಯ ದನಗಳಿಗೆ ತಿನಿಸು ನೀಡಿ ಖುಷಿಪಟ್ಟರು.
ದೇಗುಲದ ಆಡಳಿತ ಸಮಿತಿಯ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ವೆಂಕಟೇಶಪ್ರಸಾದ್ ರಿಗೆ ಕ್ಷೇತ್ರದ ಕೃತಿಗಳನ್ನು ನೀಡಿ ಗೌರವಿಸಿದರು.