ಹೊಸದಿಗಂತ ವರದಿ,ಕಲಬುರಗಿ:
ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿಯನ್ನು ಸಿಐಡಿ ವಶಕ್ಕೆ ಪಡೆದಿದ್ದಾರೆ..
ಕಲಬುರಗಿಯ ಕೆಎಸ್ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ (ಡಿಎಸ್ಪಿ) ವೈಜನಾಥ್ ರೇವೂರ ಅವರನ್ನು ವಶಕ್ಕೆ ಪಡೆದ ಸಿಐಡಿ ಪೊಲೀಸರು, ಐವಾನ್ ಏ ಶಾಹಿ ಸಕ್ಯುರ್ಟ್ ಹೌಸ್ ಆವರಣದಲ್ಲಿರೋ ಸಿಐಡಿ ಕಚೇರಿಗೆ ವಿಚಾರಣೆಗಾಗಿ ಕರೆ ತಂದಿದ್ದಾರೆ..
ಅಕ್ರಮದಲ್ಲಿ ವೈಜನಾಥ ಅವರ ಪಾತ್ರ ಏನು ಅನ್ನೋದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ ಆದ್ರೆ ಮೂಲಗಳ ಪ್ರಕಾರ ಪಿಎಸ್ಐ ಪರೀಕ್ಷಾರ್ಥ ಅಭ್ಯರ್ಥಿಗಳು ಹಾಗೂ ಕಿಂಗ್ಪಿನ್ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ….
ನಿನ್ನೆಯಷ್ಟೇ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ ಮೇತ್ರೆ ಬಂಧನವಾಗಿತ್ತು. ಬೆನ್ನಲೆ ಇಂದು ವೈಜನಾಥ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಕರೆ ತರಲಾಗಿದ್ದು, ಮತ್ತಷ್ಟು ಪೊಲೀಸ್ ಅಧಿಕಾರಿಗಳು ಬಲೆಗೆ ಬಿಳುವ ಸಾಧ್ಯತೆ ಇದೆ..