ಹೊಸದಿಗಂತ ವರದಿ, ಬೀದರ್
ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದ ತಾಲೂಕಿನ ಚಿಮಕೋಡಸ ಗ್ರಾಮದ ಮಹಿಳೆ ವಿದ್ಯಾವತಿ ನರಸಪ್ಪ ಟೋಳ್ಳೆ ಅವರ ಕುಟುಂಬಕ್ಕೆ ಶಾಸಕ ರಹೀಮ್ ಖಾನ್ 5ಲಕ್ಷ ರೂಗಳ ಪರಿಹಾರ ಚೆಕ್ ಅನ್ನು ವಿತರಿಸಿದರು.
ಮೃತ ಮಹಿಳೆಯ ಮನೆಗೆ ಭೇಟಿ ನೀಡಿದ್ಮದ ಶಾಸಕ ರಹೀಮ್ ಖಾನ್, ಪರಿಹಾರ ಚೆಕ್ ವಿತರಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅಣ್ಣಾರಾವ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಲಕ್ಷ್ಮೀ, ಕಂದಾಯ ಇಲಾಖಾಧಿಕಾರಿ ರಾಮೇಶ್ವರ, ಎಂಪಿಎಂಸಿ ಅಧ್ಯಕ್ಷ ನಾಗಶೆಟ್ಟಿ ಬಿರಾದಾರ, ತಾಪಂ ಮಾಜಿ ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಸೂರ್ಯಕಾಂತ ಪಾಟೀಲ, ಸಂಜು ಚಿಮಕೋಡೆ, ರಮೇಶ ಚಿಮಕೋಡೆ, ಅಮೃತ ಚಿಮಕೋಡೆ, ಬಸವರಾಜ ಟೊಳ್ಳೆ, ತುಕಾರಾಮ ಕರಾಟೆ ಚಿದ್ರಿ ಹಾಗೂ ಗ್ರಾಮಸ್ಥರು ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ