ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಷ್ (ಎಂಪಿವಿಎಲ್)ನಲ್ಲಿ ತಯಾರಾಗುವ ಅಳಿಸಲಾಗದ ಶಾಹಿಯನ್ನು ಪೂರೈಸುವಂತೆ ಚುನಾವಣಾ ಆಯೋಗ ಪತ್ರ ಬರೆದು ಬೇಡಿಕೆ ಸಲ್ಲಿಸಿದ್ದು , ಶಾಹಿಯನ್ನು ಕಳುಹಿಸಿಕೊಡಲು ಸಂಸ್ಥೆ ಒಪ್ಪಿಗೆ ಸೂಚಿಸಿದೆ.
ನಗರದ ಎಂಪಿವಿಎಲ್ನಲ್ಲಿ ತಯಾರಿಸುವ ಅಳಿಸಲಾಗದ ಶಾಹಿಯನ್ನು 2018ರ ರಾಷ್ಟ್ರಪತಿ ಚುನಾವಣೆಗೂ ಸಂಸ್ಥೆ ಪೂರೈಸಿತ್ತು. ಈ ಬಾರಿಯೂ ಮೈಸೂರು ಪೈಂಟ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆ ಅಳಿಸಲಾಗದ ಶಾಹಿಯುಳ್ಳ ಮಾರ್ಕರ್ ಪೆನ್ಗಳನ್ನು ಸರಬರಾಜು ಮಾಡಲಿದೆ.
ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಮಾರ್ಕರ್ ಪೆನ್ಗಳನ್ನು ಪೂರೈಸುವಂತೆ ಕೇಂದ್ರ ಚುನಾವಣಾ ಆಯೋಗವು ಪತ್ರ ಬರೆದು ಬೇಡಿಕೆ ಸಲ್ಲಿಸಿತ್ತು. ಅವರ ಬೇಡಿಕೆಯನ್ನು ಪೂರೈಸಲು ಸಮ್ಮತಿಸಿರುವ ಸಂಸ್ಥೆ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.