ಹೊಸದಿಗಂತ ವರದಿ ಬಳ್ಳಾರಿ:
ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಸ್ವಾಭಿಮಾನಿ ದೇಶಭಕ್ತ ಸಂಘಟನೆ, ಹಿಂದೂಪರ ನಾನಾ ಸಂಘಟನೆ ಪದಾಧಿಕಾರಿಗಳು ಸೋಮವಾರ ಕರೆ ನೀಡಿದ ಬಳ್ಳಾರಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಸ್ವಯಂ ಪ್ರೇರಿತವಾಗಿ ನಗರದ ಮಹಾ ಜನತೆ, ವ್ಯಾಪಾರಸ್ಥರು, ಬಳ್ಳಾರಿ ಬಂದ್ಗೆ ಬೆಂಬಲಿಸಿದ್ದು, ನಗರ ಸಂಪೂರ್ಣ ಸ್ತಬ್ಧವಾಗಿದೆ.
ದೇಶಭಕ್ತ ನಾಗರಿಕ ಸಂಘಟನೆ ಪದಾಧಿಕಾರಿಗಳು ಐದಾರು ತಂಡಗಳು ಬೈಕ್ ಮೂಲಕ ಸಂಚರಿಸಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡುವ ದೃಶ್ಯ ಕಂಡು ಬಂತು. ನಗರದ ರಾಯಲ್ ವೃತ್ತದ ಬಳಿ ಜಮಾಯಿಸಿದ ದೇಶಭಕ್ತ ನಾಗರಿಕ ಸಂಘಟನೆ ಪದಾಧಿಕಾರಿಗಳು ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಯಲ್ ವೃತ್ತ ಸಂಪೂರ್ಣ ಕೇಸರಿಮಯವಾಗಿತ್ತು. ಸ್ವಯಂ ಪ್ರೇರಿತ ಬಂದ್ ಬಳ್ಳಾರಿ ಬಂದ್ ಗೆ ವ್ಯಾಪಕ ಬೆಂಬಲ ದೊರೆತಿದ್ದು, ಸಂಪೂರ್ಣ ಸ್ತಬ್ಧವಾಗಿದೆ. ಥಿಯೇಟರ್ ಮಾಲೀಕರು, ಲಾರಿ ಮಾಲೀಕರು, ಆಟೋ ಚಾಲಕರು, ವ್ಯಾಪಾರಸ್ಥರು, ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಬಂದ್ ಗೆ ಬೆಂಬಲಿಸಿದರು.
ರಾಯಲ್ ವೃತ್ತದಿಂದ ಪ್ರಾರಂಭವಾದ ದೊಡ್ಡ ಮಟ್ಟದ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ಐದಾರು ತಂಡಗಳಾಗಿ ಸಂಚರಿಸಿ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದರು. ನಗರ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವ ಬಸ್ ಸಂಚಾರ ಮಾತ್ರ ಎಂದಿನಂತೆ ನಡೆದಿತ್ತು. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಬಳ್ಳಾರಿ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.