ಗುರೂಜಿಯವರ ಅಂತ್ಯಸಂಸ್ಕಾರ ಮುಗಿಸಿ ವಾಪಸ್​ ಆಗುವಾಗ ದುರಂತ: ಚರಂತಿಮಠದ ಶ್ರೀಗಳ ಕಾರು ಪಲ್ಟಿ

ಹೊಸದಿಗಂತ ವರದಿ,ಬಾಗಲಕೋಟೆ :

ಹುಬ್ಬಳ್ಳಿಯಿಂದ ಬೆಳಗಾವಿಗೆ ವಾಪಸ್ಸಾಗುವ ಸಂದರ್ಭದಲ್ಲಿ ಬಾಗಲಕೋಟೆಯ ಚರಂತಿಮಠದ ಶ್ರೀ ಪ್ರಭುಸ್ವಾಮೀಜಿಯವರ ಕಾರು ಪಲ್ಟಿಯಾದ ಘಟನೆ ಬುಧವಾರ ಸಂಜೆ ನಡೆದಿದೆ.

ಮಂಗಳವಾರ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ನಂತರ ಹುಬ್ಬಳ್ಳಿಯಿಂದ ಬೆಳಗಾವಿಗೆ ತೆರಳುವ ಸಂದರ್ಭದಲ್ಲಿ ಸ್ವಾಮೀಜಿಗಳು ಹೋಗುತ್ತತಿದ್ದ ಇನೋವಾ ಕಾರು ( ಕೆಎ೬೯-ಎಂ.-೧೯೪೪) ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಬಾರಿ ಕಾರು ಪಲ್ಟಿಯಾಗಿದೆ ಎಂದು ವರದಿಯಾಗಿದೆ.

ಕಾರು ಪಲ್ಟಿಯಾಗಿದ್ದರಿಂದ ಕಾರು ನಜ್ಜುಗುಜ್ಜಾಗಿದ್ದು ಚರಂತಿಮಠದ ಶ್ರೀ ಪ್ರಭುಸ್ವಾಮೀಜಿಗಳಿಗೆ ಯಾವುದೇ ಗಂಭೀರವಾದ ಗಾಯವಾಗಿಲ್ಲ. ಸ್ವಾಮೀಜಿಗಳ ಕಾರಿನಿಂದ ಎದ್ದು ಮತ್ತೊಂದು ಕಾರಿನಲ್ಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶ್ರೀಗಳು ಆರೋಗ್ಯವಾಗಿದ್ದಾರೆಂದು ಶ್ರೀಗಳು ಆಪ್ತರು ಹೊಸದಿತಂಗ ಪತ್ರಿಕೆಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!