ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಸಮೀಪದ ಮಿತ್ತಕೋಡಿಯಲ್ಲಿ ಭಾನುವಾರ ಮತ್ತೆ ಭೂಕುಸಿತ ಉಂಟಾಗಿದ್ದು, ಗುಡ್ಡ ಪ್ರದೇಶದ ಮಣ್ಣು ರಸ್ತೆಗೆ ಬಿದ್ದಿರುವುದರಿಂದ ಮಿತ್ತಕೋಡಿ ಅರ್ಕಾನ ರಸ್ತೆಯು ಬಂದ್ ಆಗಿದೆ.
ಕುರ್ನಾಡು ಮಿತ್ತಕೋಡಿಯಿಂದ ಅರ್ಕಾನ ಕಂಬಳ ಪದವಿಗೆ ಹೋಗುವ ರಸ್ತೆಯಲ್ಲಿ ಇತ್ತೀಚೆಗೆಯಷ್ಟೇ ಗುಡ್ಡ ಕುಸಿತ ಉಂಟಾಗಿ ರಸ್ತೆ ಬಂದ್ ಆಗಿತ್ತು. ಇದೀಗ ಭಾನುವಾರ ಎಡಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಭೂ ಕುಸಿತ ಉಂಟಾಗಿ ರಸ್ತೆ ಬಂದ್ ಆಗಿ ಸಂಚಾರ ಅಸ್ತವ್ಯಸ್ತವಾಗಿದೆ.
ವಿದ್ಯುತ್ ಕಂಬಗಳೂ ಉರುಳಿ ಬಿದ್ದಿವೆ. ಅಲ್ಲದೆ ಈ ಪ್ರದೇಶದಲ್ಲಿ ಇನ್ನಷ್ಟು ಗುಡ್ಡ ಪ್ರದೇಶಗಳು ಕುಸಿಯು ಭೀತಿಯಲ್ಲಿದೆ.