ಹೊಸದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ಮುಂಜಾನೆ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರಿಗೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ವೈದ್ಯರಾಗಿ ಚಿಕಿತ್ಸೆ ನೀಡಲು ಮುಂದಾದರು.
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಡಾ.ಸೌಂದರರಾಜನ್ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸ್ತ್ರೀರೋಗ ತಜ್ಞರಾಗಿದ್ದರು.ಅವರು ದೆಹಲಿಯಿಂದ ಹೈದರಾಬಾದ್ಗೆ ಹಿಂದಿರುಗುತ್ತಿದ್ದಾಗ, ಇಂಡಿಗೋ ವಿಮಾನದ ಸಿಬ್ಬಂದಿಯಿಂದ ಎಸ್ಒಎಸ್ ಘೋಷಣೆಯಾಗಿತ್ತು. ರಾಜ್ಯಪಾಲರು ತಕ್ಷಣವೇ ಕರೆಗೆ ಸ್ಪಂದಿಸಿ ರೋಗಿಗೆ ಚಿಕಿತ್ಸೆ ನೀಡಲು ಕಾರ್ಯಪ್ರವೃತ್ತರಾದರು.
ಇಂಡಿಗೋ ಆನ್-ಏರ್ ಸಿಬ್ಬಂದಿ, ಪ್ರಯಾಣಿಕರೊಬ್ಬರು ಎದೆನೋವು ದೂರು ನೀಡಿದಾಗ ತಕ್ಷಣ ವಿಮಾನದಲ್ಲಿ ಎಚ್ಚರಿಕೆ ನೀಡಲಾಯಿತು. ಈ ಕರೆಗೆ ಪ್ರತಿಕ್ರಿಯಿಸಿದ ಡಾ. ಸೌಂದರರಾಜನ್, ‘ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿ ಚಪ್ಪಟೆಯಾಗಿ ಮಲಗುವಂತೆ ತಿಳಿಸಿದರು ಬಳಿಕ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರೋಗಿ ಜೀವವನ್ನು ರಕ್ಷಿಸಿದರು.